Thursday, 7 November 2019

ಮೌನದ ದನಿ


ಬಾಗಿಲನ್ನು ತಟ್ಟುವ ಸದ್ದು ಕೇಳಿ
ಮನಸ್ಸು ಕಳವಳಗೊಂಡಿದೆ
ಯಾರು?
ಯಾಕಾಗಿ ತಟ್ಟುತ್ತಿರುವರು?
ಬಂದು ಒಳಗೆ ಮಾಡುವುದಾದರೂ ಏನು?
ಒಳ ಬಿಟ್ಟು ಹೊರಗೆ ಹೋಗುವುದೆಂದು?
ಅಯ್ಯೊ ಏನೇನೋ ಪ್ರಶ್ನೆಗಳು
ಹೌದು
ಬಾಗಿಲು ತಟ್ಟುವ ಸದ್ದು ಕೇಳಿ
ಕಳವಳಕೊಂಡಿದೆ ಮನಸ್ಸು
ಇವಿಷ್ಟು ಪ್ರಶ್ನೆಗಳ ಜತೆಗೆ ಮತ್ತಷ್ಟು
ಸೇರಿಕೊಳ್ಳುತ್ತಿದೆ
ಬಂದವನು ಮನಸ್ಸು ಕೂಡಿ
ಏನು ಮಾಡಿಬಿಡುವನು?
ನನ್ನ ಸಹ್ಯ ಅಸಹ್ಯಗಳು ಅವನಿಗೆ
ಕಾಣಿಸಿಬಿಡುವುದೇ?
ಮುಖವಾಡಗಳು ಕಳ್ಳರಂತೆ ಸಿಕ್ಕಿಬಿಡುವುದೇ
ಅವನ ಪೋಲಿಸ್ ಕೈಗಳಿಗೆ
 ಸಿಕ್ಕ ಮುಖವಾಡಗಳ ಕಂಡು
ರೋಸಿ
ಹೋಗಿಬಿಡುವನೇ ನನ್ನ ಬಿಟ್ಟು?
ಎಲ್ಲಾ ಈ ಗೊಂದಲಗಳಿಂದ
ಏಕೋ
ಅವನು ತಟ್ಟುತ್ತಿರುವುದನ್ನು ಕೇಳಿ
ಕೇಳದಂತೆ
ಸುಮ್ಮನೆ ಕುಳಿತು ಬಿಟ್ಟಿದ್ದೇನೆ.

ಜೀವಸೆಲೆ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...