Thursday, 8 November 2018

ಬೆಳಕ ಚೆಲ್ಲು ಮೊಂಬತ್ತಿಯೆ......


ಬೆಳಕ ಚೆಲ್ಲು ಕತ್ತಲಿಗೆ
ಕರಗು ಮೊಂಬತ್ತಿಯೇ
ಕರಗಿ ಕೊರಗ ನೀಗಿಸು
ಉರುಳಿ ಬೀಳುವ ಸುಖದ ಸುತ್ತೋಲೆಗೆ

ಹಸಿದ ಒಡಲು ಬರಡಾಗುವ ಮುನ್ನ
ಮುದ್ದೆ ಮಾಂಸವ ಬೇಡದ ಜೀವಕೆ
ಬೆಳಕ ಚೆಲ್ಲು ಮೊಂಬತ್ತಿಯೆ
ಒಮ್ಮೆ ನಿನ್ನ ಮೇಣದ ತುಣುಕಲಿ
ಹಸಿವ ನೀಗಿಸಲು

ನುರಿತ ಕೂಸುಗಳು
ಕಲೆತಿಹವು ಕೆಲಸಕ್ಕಾಗದದನು
ಬೇಡಿದರೂ ಬೇಡವೆಂದರೂ
ಜೀವ ಹೊಯ್ಯುವನು ಯಮನು
ಬೆಳಕು ಚೆಲ್ಲು ಮೊಂಬತ್ತಿಯೆ
ಒಮ್ಮೆ ಒಡಲೊಳಗಿಂದ ಸಾಕಿದ
ಬದುಕಿಗೆ ಬೆಳಕಾಗಲು

ಅರಳಿದ ಮೊಗ್ಗುಗಳು
ಹೂವಾಗಿ ತಲೆಯ ಕಳಸಕ್ಕೆ
ಮಿಂಚಿ ಮಾನ ಕದಿಯುವರ ಕಣ್ಣಿಗೆ ಕುಕ್ಕಬೇಕಾಗಿದೆ
ಬೆಳಕ ಚೆಲ್ಲು ಮೊಂಬತ್ತಿಯೇ
ಒಮ್ಮೆ ಕತ್ತಲೆಯ ಕಳ್ಳರಿಗೆ
ಬೇಳಕ ನೀಡಿ ಬದುಕ ಬೆಳಗಿಸಲು

¨ ಶಿವಮೂರ್ತಿ ಕೆ. ಗುಡ್ಡಿನ್ನಿ





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...