Friday, 10 August 2018

ನನ್ನವರು…


ಅಳುವ ಮನಸ್ಸ
ಸಂತೈಸುವ
ಪ್ರತಿಯೊಬ್ಬರೂ ನನ್ನವರು
-------------
ನೋವಿಗೆ ನೂರೆಂಟು ಕಾರಣಗಳಿರಬಹುದು
ಆದರೆ ನೋವಿಗೆ ಸ್ಪಂದಿಸಲು ಇರುವ
ಕಾರಣ ಒಂದೇ: ಮನುಷ್ಯತ್ವ
-------------
ಪುಸ್ತಕದಲ್ಲಿದ್ದ ಸಾಲುಗಳು
ನನ್ನ ಪ್ರತಿಬಿಂಬಿಸುತ್ತಿತ್ತೋ ಏನೋ
ಓದಲು ಭಯವಾಗುತ್ತಿದೆ..
--------
ಬಡಿದು ಸಾಯಿಸುವುದರಿಂದ
ಉಳಿಯುವುದಿಲ್ಲ ಧರ್ಮ
ಉಳಿಯುವುದು ಪ್ರೀತಿಯ ಒರತೆಯಿಂದ
------------
ನಿನಗೆ ನಿನ್ನ ಧರ್ಮದವರು
ನಿನ್ನವರಾದರೆ ನನಗೆ
ಧರ್ಮವ ಮೀರಿದ ಪ್ರೀತಿಯ
ಬಿತ್ತುವವರೆಲ್ಲರೂ ನನ್ನವರು…


¨ ಜೀವಸೆಲೆ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...