Monday, 8 October 2018

ನಗ್ನತಾಯಿ ಧರ್ಮಸಭೆ




¨ ನವೀನ್ ಮಿತ್ರ, ಬೆಂಗಳೂರು

ತಾಯ ದೂಡುವಿರಾ
ತಾಯ ಮರೆಯುವಿರಾ
ಧರ್ಮವಲ್ಲಾ ಅವಳು
ಧರ್ಮಗಳ ಉದ್ಧಾರಕಿ
ಇವಳು ತಾಯಿ ಧರ್ಮಸಭೆ

ಕಂಡಿಹಳು ಸ್ನೇಹವ
ಬಯಸಿಹಳು ಒಮ್ಮತವ
ಕಲಿಸಿಹಳು ಸ್ವಾತಂತ್ರ್ಯವ
ಲ್ಲಿಗೆ ದೂಡುವಿರಿ ಆಕೆಯ
ಇವಳು ತಾಯಿ ಧರ್ಮಸಭೆ

ಆಶ್ರಯಿಸಿಹಳು ತಾಯಿಯಂತೆ
ವಿದ್ಯೆ ನೀಡಿಹಳು ಗುರುವಿನಂತೆ
ಸೇವೆ ಸಲ್ಲಿಸಿಹಳು ದಾಸಿಯಂತೆ
ಅಲ್ಪವೆನ್ನುವಿರಾ ಈಕೆಯ
ಇವಳು ತಾಯಿ ಧರ್ಮಸಭೆ

ಎದೆಹಾಲಿಲ್ಲದೆ ರಕ್ತ ಉಣಿಸಿಹಳು
ಚಿದ್ರಿಸುವಿರಾ ಆಕೆಯ ದೇಹವ
ಕೊಲ್ಲುವಿರಾ ಆಕೆಯ ಮಕ್ಕಳ
ಕಟ್ಟುವಳು ಪುನಃ ನವಧರ್ಮಸಬೆ
ಇವಳು ತಾಯಿ ಧರ್ಮಸಭೆ

ಬರಿದಾಗಿಸುವಿರಾ ಆಕೆಯ ಮಡಿಲ
ಭಿನ್ನಗೊಳಿಸುವಿರಾ ಆಕೆಯ ಒಡಲ
ಇವಳು ವಿವಸ್ತ್ರವಾದಂತೆಲ್ಲಾ
ಲೋಕವು ಅರಿವುದು ನಿಜ ಸತ್ಯವ
ಇವಳು ತಾಯಿ ಧರ್ಮಸಭೆ





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...