Friday, 7 June 2019

ಮೌನದ ದನಿ

ಹಸಿರೇ ಉಸಿರಾಗಲಿ
¨ ಎ ಡೇ ಕು 

ಮೊಗ್ಗಿನ ಮುಸುಕಿನಲಿ
ಹೂವೊಂದು ಹಿಗ್ಗುವುದು
ಹಣ್ಣೊಳಗಿನ ಬೀಜದಲಿ
ಮರವೊಂದು ಬಿರಿಯುವುದು 

ಬೀಜ ಬ್ರಹ್ಮಾಂಡದಲಿ 
ಕೋಟಿ ವೃಕ್ಷದ ಸೈನ್ಯ
ಮಣ್ಣ ಪೊರೆಯ ಬಿರಿದು
ಹಸಿರು ಕಣ್ಣ ತೆರೆದು

ಖಗ, ಮೃಗದ ಗೂಡಾಗಿ 
ಸೃಷ್ಟಿಯ ಸೊಬಗಾಗಿ 
ಕ್ರಿಮಿ ಕೀಟಕೆ ನೆಲೆಯಾಗಿ
ಜೀವಾತ್ಮಕೂ ಸೆಲೆಯಾಗಿ

ಮಣ್ಣೊಡಲು ಬಸಿರಾಗಿ
ವನಸಿರಿಯು ಹೊನಲಾಗಿ 
ಎಲೆ ಎಲೆಯ ಲೀಲೆಯಲಿ
ಹಸಿರೆಲ್ಲಾ ಉಸಿರಾಗಿ ! 




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...