Friday, 7 June 2019

ಸೋತು ಗೆದ್ದವರು


ಹಾಳು ಬಿದ್ದ ಊರಿನೊಳಗೆ
ಹುರಿ ಮೀಸೆಯ ಗೌಡನು
ಕೇಸರಿ ಬಣ್ಣ ರುಮಾಲಿನಲಿ 
ಸೋತು - ಗೆದ್ದ ಬಿಗುಮಾನವು !

ಹಸಿರು, ಬಿಳಿ ಬಣ್ಣಗಳ
ನುಂಗುತ್ತಿದೆ ಕೇಸರಿಯು
ರಾಷ್ಟ ಭಕ್ತಿ ಅಮಲಿನಲಿ
ಬಿರುಕುಬಿಟ್ಟ ಭಾವೈಕ್ಯತೆ

ಮತಯಂತ್ರದ ಸುತ್ತ
ಅನುಮಾನದ ಹುತ್ತ
ತಂತ್ರ ಕುತಂತ್ರಾಂಶದಲಿ
ಸೋತಿರುವುದು ದೇಶ

ದಾರಿ ತಪ್ಪಿದ ದೇಶಭಕ್ತಿ
ದ್ವೇಷದಿಂದಲೇ ಮುಕ್ತಿ ??
ಬಹುತ್ವದ ಭಾರತಕ್ಕೆ
ಸಂವಿಧಾನವೇ ಶಕ್ತಿ 


¨ ಡೇವಿಡ್ ಕುಮಾರ್. ಎ. 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...