Saturday, 20 June 2020

ಅಮಲಿನ ಅಮಾಯಕರು

                - ಡೇವಿಡ್ ಕುಮಾರ್. ಎ

 ನಮ್ಮ ಕರುಳುಗಳೂ ಬಾಡಿಗೆಗಿವೆ

ಜಠರ, ಮೂತ್ರಪಿಂಡ, ಪಿತ್ತಜನಕಾಂಗ

ಗುಂಬಿಸಿಬಿಡಿ ಮದ್ಯದ ಅಮಲ

ಹೆಚ್ಚಲಿ ರಾಜ್ಯದ ಭೋಗ ಖಜಾನೆ!

 

ವ್ಯವಸ್ಥೆಯ ಬಲಿಪಶುಗಳು

ಜಾತಿಯಲಿ ಕೀಳು, ವರ್ಗದಲಿ ಕಡೆ,

ಮದ್ಯವೆಂಬ ಮಿಥ್ಯೆ, ಭ್ರಮೆಯಲಿ,

ಬಾಳ ಕಳೆದವರು, ಕುಡುಕರೆಂಬ ಬಿರುದು! 

 

ಕರಿನಾಯಿ’, ‘ಮಿಂಚುಳ್ಳಿ’

ಹಳೆ ಮುದುಕ’ ಕೇಳಾ...

ಆರ್ಥಿಕ ಯಂತ್ರ-ಗಾಲಿಯ ತೈಲವೇ ನಾವು

ನಮ್ಮ ಪ್ರಾಣದ ಫಲಾನುಭವಿಗಳಾರು?

 

ಮಾರುವವರ ಮಾರಿಹಬ್ಬದಲಿ

ಮಾರಿಕೊಂಡವರು ನಾವು

ಬಲಿಕೋಣದಷ್ಟೇ ಅಮಾಯಕರು

ಬಿದಿರು ಬಸ್ಸಿನ ಪ್ರಯಾಣಿಕರು!


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...