Friday, 12 July 2019

ಒಂದೇ ಒಂದು ಕ್ಷಣ




ಒಂದೇ ಒಂದು ಕ್ಷಣ ನಿನ್ನ ಬದಿ 
ಕೂರಲನುಗ್ರಹಿಸು ಸ್ವಾಮಿ,
ನನ್ನ ಕೈಯೊಳಗಿನ ಕೆಲಸವನ್ನೆಲ್ಲ 
ಆಮೇಲೆ ಮುಗಿಸುವೆ

ನಿನ್ನ ಮುಖ ಮರೆಯಾದರದೋ, 
ನನ್ನೆದೆ ಡವಗುಟ್ಟುವುದು,
ದುಡಿಮೆಯದು ದಡಕಾಣದ ಕಡಲಲಿ 
ಮುಗಿಯದ ಜೀತವಾಗುವುದು,

ಇಂದೆನ್ನ ಕಿಟಕಿಯಲಿ ಬೇಸಿಗೆಯು ನುಸುಳಿದೆ 
ನಿಟ್ಟುಸಿರು ಗೊಣಗಾಟವನೊತ್ತು;
ಹೂದೋಟದಿ ದುಂಬಿಗಳು ಎಡಬಿಡದೆ ಕಿರುಲುತಿವೆ 
ಶೋಕಗೀತೆಯ ಸುತ್ತು.

ಇದುವೇ ತಕ್ಕ ಸಮಯ, ಈ ನೀರವದ 
ನಿಡಿದಾದ ಬಿಡುವಿನಲಿ,
ನಿನಗೆದುರುಬದುರಾಗಿ ಸುಮ್ಮನೆ ಕುಳಿತು, 
ಬದುಕಲು ಪಣತೊಡುವೆ.



(ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯಿಂದ
I ask for a moment's indulgence to sit by thy side 
ಪದ್ಯದ ಅನುವಾದ ಸಿ ಮರಿಜೋಸೆಫ್ ನವರಿಂದ)



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...