ಒಂದೇ ಒಂದು ಕ್ಷಣ ನಿನ್ನ ಬದಿ
ಕೂರಲನುಗ್ರಹಿಸು ಸ್ವಾಮಿ,
ನನ್ನ ಕೈಯೊಳಗಿನ ಕೆಲಸವನ್ನೆಲ್ಲ
ಆಮೇಲೆ ಮುಗಿಸುವೆ
ನಿನ್ನ ಮುಖ ಮರೆಯಾದರದೋ,
ನನ್ನೆದೆ ಡವಗುಟ್ಟುವುದು,
ದುಡಿಮೆಯದು ದಡಕಾಣದ ಕಡಲಲಿ
ಮುಗಿಯದ ಜೀತವಾಗುವುದು,
ಇಂದೆನ್ನ ಕಿಟಕಿಯಲಿ ಬೇಸಿಗೆಯು ನುಸುಳಿದೆ
ನಿಟ್ಟುಸಿರು ಗೊಣಗಾಟವನೊತ್ತು;
ಹೂದೋಟದಿ ದುಂಬಿಗಳು ಎಡಬಿಡದೆ ಕಿರುಲುತಿವೆ
ಶೋಕಗೀತೆಯ ಸುತ್ತು.
ಇದುವೇ ತಕ್ಕ ಸಮಯ, ಈ ನೀರವದ
ನಿಡಿದಾದ ಬಿಡುವಿನಲಿ,
ನಿನಗೆದುರುಬದುರಾಗಿ ಸುಮ್ಮನೆ ಕುಳಿತು,
ಬದುಕಲು ಪಣತೊಡುವೆ.
(ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯಿಂದ
I ask for a moment's indulgence to sit by thy side
ಪದ್ಯದ ಅನುವಾದ ಸಿ ಮರಿಜೋಸೆಫ್ ನವರಿಂದ)
No comments:
Post a Comment