Wednesday, 15 January 2020

ಮೌನದ ದನಿ

- ಜೀವಸೆಲೆ

ಉರಿದ ಹಣತೆ
ಹೇಳಿದ್ದು ಇಷ್ಟೇ
ಸುಟ್ಟುಕೊಂಡರಷ್ಟೇ ಬೆಳಕು

ಬೆಳಕು ನಿನ್ನ
ಸಂಭ್ರಮಿಸಿ ಬೆಳಕಾಗಲು
ನಿನ್ನಂತೆ ಹಣತೆಯಾಗ ಹೊರಟಿದ್ದೇನೆ.

ಇಡೀ ಲೋಕಕ್ಕೆ ಬೆಳಕಾಗಬೇಕೆಂಬ ಭ್ರಮೆಯಿಂದಲ್ಲ
ಎಲ್ಲವನ್ನು ಮರೆತು ಬಿಡುವ
ಈ ಜಗತ್ತಿನಲ್ಲಿ ನಿನ್ನನ್ನು
ಎಂದೆಂದಿಗೂ ಜೀವಂತವಾಗಿರಿಸಬೇಕೆಂಬ
ಸಣ್ಣ ಆಸೆಯಿಂದ

ಹೌದು
ಹಣತೆಯಾಗಿ ಬೆಳಕು ಚೆಲ್ಲಲು ನಾನು
ನೆನಪಿಸು ಆ ಹಣತೆ
ನಾನಲ್ಲ ನೀನು !

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...