Saturday, 11 January 2020

ಗೀತಾಂಜಲಿಯ ತುಣುಕು


ನಾ ಹಾಡುವ ಹಾಡದು ಇಂದಿಗೂ ಹಾಡದೇ ಉಳಿದಿದೆ.
ದಿನವೆಲ್ಲ ತಂಬೂರಿಯ ತಂತಿಯನು ಬಿಗಿಯಲೂ ಬಿಚ್ಚಲೂ ಕಳೆದಿದೆ.
ಗಳಿಗೆಯದು ಬಂದಿಲ್ಲ, ಶಬುದಗಳೇ ಸಿಗುತಿಲ್ಲ;
ಮಾತಾಡುವ ಬಯಕೆಯದು ಮನಸಿನಲಿ ತುಡಿಯುತಿದೆ.
ಮೊಗ್ಗಿನ್ನೂ ಅರಳಿಲ್ಲ, ತಂಬೆಲರು ನಿಟ್ಟುಸಿರ ಸೂಸಿದೆ.
ನಾನವನ ಮೊಗವ ಕಂಡಿಲ್ಲ, ಅವನ ದನಿಯನೂ ಕೇಳಿಲ್ಲ;
ಮನೆಯಾಚೆ ಬೀದಿಯಲಿ ಅವನ ಹೆಜ್ಜೆಯ ಸಪ್ಪಳವಷ್ಟೇ ಆಲಿಸಿದೆ.
ಅವನಿಗಾಗಿ ಮಣೆಹಾಕಿ ದಿನವೆಲ್ಲ ಕಳೆದೋಯ್ತು;
ದೀಪ ಹಚ್ಚುವುದ ಮರೆತೆ,
ಅವನ ಒಳಗೆ ಕರೆಯಲೂ ಸೋತೆ,
ಅವನ ಭೇಟಿಯ ಬಯಕೆಯಲಿ ಬದುಕಿರುವೆ; ಆದರೆ ಆ ಭೇಟಿಯಿನ್ನೂ ಆಗಿಲ್ಲ.


ಮೂಲ: ರವೀಂದ್ರನಾಥ ಟ್ಯಾಗೋರರ
The song that I came to sing

 ಭಾವಾನುವಾದ, ಸಿ ಮರಿಜೋಸೆಫ್

-0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...