Friday, 13 July 2018

ದನಿ ರೂಪಕ


“ಅವುಗಳನ್ನು ಮಾಡಿ”
ಬರಹಗಾರ, ವಾಗ್ಮಿ ಮತ್ತು ಮ್ಯಾನೆಜ್‌ಮೆಂಟ್ ಗುರು ಟಾಮ್ ಪೀಟರ‍್ಸ್ ತನ್ನ ಹೊಸ ಪುಸ್ತಕದಲ್ಲಿ ಈ ಕಥೆಯನ್ನು ಹೇಳುತ್ತಾನೆ:

ಒಬ್ಬ ವ್ಯಕ್ತಿ ಜೆ. ಪಿ ಮಾರ್ಗನ್ ಅವರ ಬಳಿ ಬಂದು ತನ್ನ ಕೈಯಲ್ಲಿದ್ದ ಕಾಗದದ ಕವರನ್ನು ತೋರಿಸಿ ಹೇಳಿದನಂತೆ “ಸರ್ ನನ್ನ ಕೈಯಲ್ಲಿರುವ ಕವರಿನೊಳಗೆ ಯಶಸ್ಸಿನ ಖಾತ್ರಿ ಸೂತ್ರವನ್ನು ಹೊಂದಿದ್ದೇನೆ, ಅದು ನಿಮಗೆ ಬೇಕೆನಿಸಿದರೆ ೨೫ ಸಾವಿರ ಡಾಲರ್ ಕೊಟ್ಟರೆ ಸಂತೋಷದಿಂದ ಅದನ್ನು ನಿಮಗೆ ಒಪ್ಪಿಸಿ ಬಿಡುತ್ತೇನೆ”

“ಸರ್” ಜೆ ಪಿ ಮಾರ್ಗನ್ ಉತ್ತರಿಸುತ್ತಾ “ನಿಮ್ಮ ಕೈಯಲ್ಲಿರುವ ಕಾಗದದ ಕವರಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ . . . ಅದರೊಳಗೆ ಏನಿದೆ ಎಂದು ತೋರಿಸಿದರೆ ಮತ್ತು ಅದನ್ನು ನಾನು ಇಷ್ಟಪಟ್ಟರೆ ಕಂಡಿತ ನೀವೂ ಕೇಳುತ್ತಿರುವ ಹಣದ ಮೊತ್ತವನ್ನು ಪಾವತಿಸುತ್ತೇನೆ”

ಆ ವ್ಯಕ್ತಿಯು ಜೆ ಪಿ ಮಾರ್ಗನ್ ಅವರ ಮಾತನ್ನು ಒಪ್ಪಿ ಕಾಗದದ ಕವರನ್ನು ಜೆ ಪಿ ಮಾರ್ಗನ್ ಅವರಿಗೆ ಹಸ್ತಾಂತರಿಸಿದನು. ಜೆ ಪಿ ಮಾರ್ಗನ್ ಅವರು ಕಾಗದದ ಕವರಲ್ಲಿದ್ದ ಪತ್ರವನ್ನು ಹೊರ ತೆಗೆದು, ಓದಿ ಆ ವ್ಯಕ್ತಿ ಹಿಂದುರುಗಿಸಿ ೨೫ ಸಾವಿರ ಡಾಲರನ್ನು ಅವನಿಗೆ ಕೊಟ್ಟನಂತೆ.

ಆ ಹಾಳೆಯ ಮೇಲೆ ಈ ರೀತಿಯಾಗಿ ಬರೆದಿತ್ತಂತೆ:

“ಪ್ರತಿದಿನ ಬೆಳಿಗ್ಗೆ ಆ ದಿನ ಮಾಡಬೇಕಾದ ಕೆಲಸ ಕಾರ್ಯಗಳ ಪಟ್ಟಿ ಮಾಡಿ . .”

“ಅವುಗಳನ್ನು ಮಾಡಿ”

---------------------------------------------------

ಲೇಖಕ ಪೆಗ್ಗಿ ವಾಲ್‍ಸ್ಟೀಟ್ ಜರ್ನಲ್‍ನಲ್ಲಿ ಈ ರೀತಿ ಬರೆಯುತ್ತಾರೆ:

ಈ ಜಗತ್ತು ಒಂದು ರೀತಿ ದೊಡ್ಡ ಸುಳ್ಳುಗಾರನಂತೆ. ಅದು ಹಣ ಸಂಪತ್ತನ್ನು ಆರಾಧಿಸಿ ಅವುಗಳಿಗೆ ಒಲಿಯುವಂತೆ ತೋರಿಸುತ್ತದೆ. ಆದರೆ ದಿನದ ಕೊನೆಯಲ್ಲಿ ಅದು ಒಲಿಯುವುದು ಮತ್ಯಾವುದಕ್ಕೊ.

ಇನ್ನೊಂದು ಕಡೆ ಖ್ಯಾತಿಯು, celebrity ಗಳನ್ನು ಗೌರವಿಸಿ ಮನ್ನಣೆ ಕೊಡುವಂತೆ ಕಂಡರೂ ಅದು ಗೌರವಿಸುವುದು ಮತ್ತೆಯೇನೋ.

ಹೌದು. . . ಜಗತ್ತು ಮೆಚ್ಚಿ ಆರಾಧಿಸಿ ಒಲಿಸಿಕೊಳ್ಳುವುದು ಮತ್ತು ಕಳೆದುಕೊಳ್ಳದಂತೆ ಬಯಸುವುದು ಒಳ್ಳೆತನವನ್ನು.

ಅದು ಒಳ್ಳೆತನವನ್ನು ಮೆಚ್ಚುತ್ತದೆ. ಕೊನೆಗೆ ಉದಾರತೆ, ಪ್ರಾಮಾಣಿಕತೆ, ಧೈರ್ಯ, ಅನುಕಂಪ, ಮತ್ತು ಲೋಕದ ಕಲ್ಯಾಣಕ್ಕೆ, ಉದ್ದಾರಕ್ಕೆ ಉಪಯೋಗಿಸಿಕೊಂಡ ಪ್ರತಿಭೆಗಳನ್ನು ಗೌರವಿಸುತ್ತದೆ.

ನಾವು ಜೋ ಬಗ್ಗೆ ಮಾತನಾಡುವಾಗ ಜೋ ಒಬ್ಬ ಶ್ರೀಮಂತನಾಗಿದ್ದ ಎಂದು ಹೊಗಳುವುದಿಲ್ಲ. . . ಸಾಧ್ಯವಾದಾದರೆ ಜೋ ಜನರನ್ನು ಚೆನ್ನಾಗಿ ನೋಡಿಕೊಂಡ ಅಂತ ಹೇಳುತ್ತೇವೆ.

ಇದು ಒಂದು ಎಚ್ಚರಿಕೆ. . .

ನಮ್ಮ ಶ್ರೀಮಂತಿಕೆಯಿಂದಾಗಲೀ, ಪದವಿ ಪುರಸ್ಕಾರಗಳಿಂದಾಗಲೀ ಅಥವಾ ಬೃಹತ್ ಮನೆಯ ಕಟ್ಟಡದಿಂದಾಗಲೀ ಈ ಜಗತ್ತಿನ ಮೇಲೆ ಪರಿಣಾಮ ಬೀರಲಾಗುವುದಿಲ್ಲ. . . ನಮ್ಮ ಸುತ್ತಮುತ್ತಲಿರುವ ಜನರ ಮೇಲೆ ನಾವು ಬೀರುವ ಧನಾತ್ಮಕವಾದ ಪ್ರಭಾವದಿಂದ ನಾವು ಈ ಜಗತ್ತಿನ ಮೇಲೆ ಪರಿಣಾಮ ಬೀರಬಹುದು…
-------------------------------------

ನಿನ್ನ ಅನುಕಂಪವನ್ನು
ದೌರ್ಬಲ್ಯವೆಂದು ಮೂದಲಿಸಬಹುದು
ಆದರೂ ನೀನು ಕರಣೆಯ ಮಡಿಲಾಗು
ನೀನು ಚಾಚುವ ಸಹಾಯ ಹಸ್ತವು
ಬೇಕಿಲ್ಲದಿರಬಹುದು
ಇತರರ ಗಮನಕ್ಕೆಬರದಿರಬಹುದು
ಆದರೂ ನೀನು ಸಹಾಯಮಾಡು
ನೀನು ಪ್ರಾಮಾಣಿಕನಾಗಿರುವುದರಿಂದ
ಜನರು ನಿನಗೆ ಮೋಸ ಮಾಡುವರು
ಅದರೂ ನೀನು ಪ್ರಾಮಾಣಿಕತೆಯಿಂದ ಬಾಳು
ನೀನು ಈ ದಿನ ಮಾಡಿದ ಸಹಾಯ
ನಾಳೆ ಮರೆತುಹೋಗಬಹುದು
ಆದರೂ ಯಾವಗಲೂ ಒಳ್ಳೆಯದನ್ನು ಮಾಡು
ಯಾಕೆಂದರೆ ಬದುಕಿನ ಲೆಕ್ಕಾಚಾರ ನಡೆಯುವುದು ನಿನ್ನ ಮತ್ತು ಇತರರ ನಡುವೆಯಲ್ಲ..ನಿನ್ನ ಮತ್ತು ದೇವರ ಮಧ್ಯೆ

- ಅನು

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...