Wednesday, 30 January 2019

ಒಬ್ಬಂಟಿ ಮುದುಕಿ



ಬಾಡುವ ಜೀವವೊಂದು
ಕಿತ್ತು ತಿನ್ನುತ್ತಿರುವದು ಹಣ್ಣು
ಹೊಟ್ಟೆ ಬಾಡಿಗೆಯ ಕಟ್ಟಲು
ಜೀವನುದ್ದಕ್ಕೂ ಮುದುಕಿಯ
ಮನಸನ್ನು ತಿಂದ ಮಕ್ಕಳೆಷ್ಟೋ
ಅವಳ ಹಣವ ಕಸಿದವರೆಷ್ಟೋ
ಅವರವರ ಸುಖದ ಕೂಲಿಗಾಗಿ

ಒಬಂಟಿಯಾಗಿ ತಾನು 
ಒಂಟಿ ಕೋಲಿನ ಜಂಟಿಯಾಗಿ
ಬದುಕ ನೂಕಲೇಬೇಕಲ್ಲವೆ
ಉಂಗುಟಿನ ಚಪ್ಪಲಿ ಸವೆಯುದರೊಳಗೆ 
ಸವೆದರು ಖರೀದಿಸಿಕೊಡುವ
ಮಾಲಿಕನಿಲ್ಲ ಜೊತೆಗೆ
ಇವತ್ತೋ ನಾಳೆ ತುಕ್ಕು ಹಿಡಿಯುವ
ಬಟ್ಟೆಯ ಬಿಟ್ಟು

ಹಣ್ಣು ಸಿಗುತ್ತಿಲ್ಲ 
ಎಷ್ಟೆ ಕೈ ಚಾಚಿದರು
ಹಸಿವು ನೀಗುತ್ತಿಲ್ಲ
ಎಷ್ಟೋ ಮಕ್ಕಳಿದ್ದರು
ಉದ್ದನೆಯ ಕೋಲೆ ಆಧಾರ 
ಮುದಿ ಜೀವಕೆ 
ಕಿತ್ತು ತಿಂದೆ ತಿನ್ನುವೇ ಹಣ್ಣನು
ಬಾಯ ದಣಿವಾರಿಸಲು
ನನಗಾದ ನೋವು ಗಿಡದ ಎಲೆಗೂ
ನಾ ನೀಡಲಾರೇನು

ನಾ ಸತ್ತಿಲ್ಲ ಮುಂದೇನೂ ಸಾಯಲ್ಲ
ಬದುಕೆ ತೀರುವೆನು
ಗಿಡ ಮರಗಳ ಅರಮನೆಯಲಿ
ಸಿಕ್ಕ ಸಿಕ್ಕ ಹಣ್ಣ ಹಂಪಲು
ತಿಂದು
ಹಸಿವಿನ ಬೇರಿಗೆ ಜೀವ ನೀಡುವೆನು
ಬಿದ್ದ ಹಣ್ಣನು ಲೆಕ್ಕಿಸದೆ 
ತಿಂದು ಕಾಲ ಕಳೆವೆನು
ಮನದಾಳದ ನೋವ ಮರೆವೆನು


- ಜಿ. ಶಿವಮೂರ್ತಿ, ಕೆ.ಗುಡದಿನ್ನಿ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...