- ಡೇವಿಡ್ ಕುಮಾರ್. ಎ
ಮನೆ ಮನೆಯ ಮುಂದೆ
’ಅಚ್ಚೇ ದಿನ’ ದ ಫಲಕ,
’ವಿಕಾಸ’ ದ ಭ್ರಾಂತಿ
ಕೋಟಿ ಜನರ ಪುಳಕ
ಕಾಶ್ಮೀರದ ಕಣಿವೆಯಲಿ
ಕಾಮನ ಬಿಲ್ಲಿಗೂ ಗಲ್ಲು !
’ಸ್ವಾತಂತ್ರ್ಯ’ದ ಹಕ್ಕಿಗಳಿಗೆ
ಬಂಗಾರದ ಪಂಜರ
ಅನ್ನವಿಲ್ಲದ ನಾಡು
ದೇಶಭಕ್ತಿಯ ಅಮಲು !
ಬಂಡಾಯದ ಬಡಪಾಯಿಗೆ
’ಉಗ್ರ’ನೆಂಬ ಬಿರುದು
ಊಟ, ಬಟ್ಟೆಗೂ ಕಾನೂನು
ಬಂಧಿಖಾನೆಯ ಭಯ,
ಸಿಂಹಗಳಿಗೂ ಸಸ್ಯಾಹಾರ
ಜಾರಿಯಾಗಿದೆ ನಿಯಮ !
No comments:
Post a Comment