Wednesday, 9 October 2019

ಮಾತನಾಡು ಕವಿತೆಯೇ. . ಮಾತನಾಡು…


ಕವಿತೆ
ಮುನಿಸಿಕೊಂಡಿರುವೆ ಏಕೆ?
ಹೇಳಲು ನೂರೆಂಟಿರಲು
ಮುನಿಸು ಏಕೆ?
ಸಾಕಿನ್ನು ಮುನಿಸು
ಹೇಳಬೇಕಾಗಿರುವುದ ಹೇಳದೆ
ಮುನಿಸಿಕೊಂಡರೆ
ದುಷ್ಟನ ಮುಖದಲ್ಲಿ ಗೆದ್ದ ನಗು ಬೀರಿ
ಕೊಲ್ಲುವನ ಕೈಗಳಿಗೆ ಅಧಿಕಾರ ಸೇರಿ
ಸುಳ್ಳು ಬಾಯಲಿ ಮಂತ್ರಗಳು ಮೂಡಿ
ಕತ್ತಲು ಬೆಳಕಾ ನುಂಗಿಬಿಟ್ಟು
ಜಗವೇ ಕತ್ತಾಲಾಗಿಬಿಡುವುದು…
ಮಾತನಾಡು ಕವಿತೆಯೇ. . ಮಾತನಾಡು
ನಿನ್ನದ್ದು ಮಾತಲ್ಲ
ಮಾತಿನಲ್ಲಿರುವ ಜೀವಕಣ
ನಿನ್ನದ್ದು ಪದಗಳಲ್ಲ
ಪದಗಳಲ್ಲಿರುವ ಪ್ರೀತಿಯ ಕಾವು
ನಿನ್ನದ್ದು ಉಪಮೆಗಳಲ್ಲ
ಉಪಮೆಗಳಲ್ಲಿರುವ ಕೂಡುವ ಭಾವ
ನಿನ್ನದ್ದು ದನಿಯಲ್ಲ
ದನಿಯಲ್ಲಿರುವ ಹೋರಾಟದ ಕಿಚ್ಚು
ನಿನ್ನದ್ದು ರೂಪವಲ್ಲ
ರೂಪದಲ್ಲಿರುವ ಕುರೂಪದ ಬಗೆಗಿನ ನಿಟ್ಟುಸಿರು
ನಿನ್ನದ್ದು ಪ್ರಾಸವಲ್ಲ
ಪ್ರಾಸದಲ್ಲಿರುವ ಸತ್ಯದ ಆಳ ತಳಮಳ
ಮಾತನಾಡು ಕವಿತೆಯೇ ಮಾತನಾಡು
ನೀನು ಮಾತಾಡದಿದ್ದರೆ
ಜಗವೇ ಕತ್ತಲಾಗಿಬಿಡುವುದು…
ಮಾತನಾಡು ಕವಿತೆಯೇ. . ಮಾತನಾಡು….



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...