ಇನ್ನಾ
jeevadani2016@gmail.com
ಕಚ್ಚುವುದು ಚೇಳಿನ ಗುಣ, ರಕ್ಷಿಸುವುದು ನನ್ನ ಗುಣ
ಹೆನ್ರಿ ನೌವೆನ್ ಈ ಒಂದು ಕಥೆಯನ್ನು ಹೇಳುತ್ತಾರೆ. ಒಬ್ಬ ಮುದುಕ ಗಂಗಾ ನದಿಯ ತೀರದಲ್ಲಿ ಪ್ರತಿದಿನ ಧ್ಯಾನ ಮಾಡುತ್ತಿದ್ದ. ಒಂದು ದಿನ ಧ್ಯಾನ ಮಾಡುವಂತಹ ಸಮಯದಲ್ಲಿ, ಚೇಳೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದನ್ನು ಕಂಡು, ಚೇಳನ್ನು ರಕ್ಷಿಸಲು ಮುನ್ನುಗ್ಗಿದ್ದ. ಚೇಳನ್ನು ನೀರಿನಿಂದ ತೆಗೆಯಲು ಪ್ರಯತ್ನಿಸುತ್ತಿದ್ದಂತೆ, ಆ ಚೇಳು ಅವನ ಕೈ ಕಡಿದಿತ್ತು. ಆದರೂ ಬಿಡದೆ, ಚೇಳನ್ನು ನೀರಿನಿಂದ ಮೇಲೆತ್ತಲು ಹೋದಾಗ, ಮತ್ತೊಮ್ಮೆ ಆ ಚೇಳು ಅವನ ಕೈಯನ್ನು ಕಚ್ಚಿತ್ತು. ಅವನ ಕೈ ನೋವಿನಿಂದ ಉಬ್ಬಲು ಪ್ರಾರಂಭಿಸಿತ್ತು. ಆದರೂ ಕೈಚೆಲ್ಲದೆ, ಚೇಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಕಂಡ ಒಬ್ಬ ಯಾತ್ರಿಕ “ಹೇ ಮೂರ್ಖ, ನಿನಗೆ ಏನಾಗಿದೆ? ಆ ಕ್ರೂರಿ ಕೃತಜ್ಞತೆಯಿಲ್ಲದ ಪ್ರಾಣಿಯನ್ನು ರಕ್ಷಿಸಲು ನಿನ್ನ ಜೀವವನ್ನೇ ಅಪಾಯಕ್ಕೆ ದೂಡುತ್ತಿದ್ದೀಯಲ್ಲಾ? ನಿನಗೆ ಬುದ್ಧಿ ಇದ್ಯಾ?” ಎಂದು ಬೈಯುತ್ತಿದ್ದಂತೆ, ಆ ಮುದುಕ ಶಾಂತವಾಗಿ “ ಓ ಸ್ನೇಹಿತನೇ ಕಚ್ಚುವುದು ಚೇಳಿನ ಗುಣ, ರಕ್ಷಿಸುವುದು ನನ್ನ ಗುಣ” ಎಂದು ಹೇಳಿ ತನ್ನ ಪ್ರಯತ್ನವನ್ನು ಮುಂದುವರಿಸಿದನಂತೆ.
ಎಲ್ಲರನ್ನೂ ರಕ್ಷಿಸುವುದು ದೇವರ ಸ್ವಭಾವ. ಕಳೆದು ಹೋದವರನ್ನು ಹುಡುಕಿ ತರುತ್ತಾನೆ, ಗಾಯಗೊಂಡವರನ್ನು ಗುಣಪಡಿಸುತ್ತಾನೆ, ತಪ್ಪು ಮಾಡಿದವರನ್ನು ಕ್ಷಮಿಸಿ ಆಲಂಗಿಸಿಕೊಳ್ಳುತ್ತಾನೆ. ಹತಾಶೆಯಲ್ಲಿ ಇರುವವರಿಗೆ ಭರವಸೆ ಕೊಡುತ್ತನೆ. ದೇವರಿಗೆ ಪ್ರತಿಯೊಬ್ಬರೂ ಮುಖ್ಯರೇ. ಅಮುಖ್ಯರೆಂಬುವರು ಯಾರು ಇಲ್ಲ. ದೇವರ ಪ್ರೀತಿ ಕೂಡು, ಕಳೆ, ಗುಣಕಾರಗಳನ್ನು ಅಂದರೆ ಲೆಕ್ಕವನ್ನು ಮೀರಿದ್ದು. ನಮ್ಮ ದುಷ್ಟತನಕ್ಕೆ ಪಶ್ಚಾತ್ತಾಪ ಪಟ್ಟು ಹುಡುಕಿ ಬರುವ ದೇವರನ್ನು ತಬ್ಬಿಕೊಳ್ಳೋಣ.
ಬದುಕೆಂಬುದು ಇಂದು ನಾಳೆಗಳ ವಾಸ್ತವ
ಕಾರ್ವೆತ್ ಮಿಷೆಲ್ ಹೇಳಿದ ಕಥೆಯಿದು. ಒಬ್ಬ ಒಂದು ಗಿಳಿಯನ್ನು ಖರೀದಿಸಿ, ಮನೆಗೆ ತಂದು “ಇವೊತ್ತು” ಎಂದು ಹೇಳಲು ಕಲಿಸಿಕೊಟ್ಟನಂತೆ. ಅ ಗಿಳಿ ಅ ವ್ಯಕ್ತಿಯನ್ನು ಕಂಡಾಗೆಲ್ಲಾ “ಇವೊತ್ತು” “ಇವೊತ್ತು” ಎಂದು ಕಿರಿಚಿಕೊಳ್ಳುತ್ತಿತ್ತಂತೆ. ಅವನು ಬೆಳಗ್ಗೆ ಎದ್ದಾಗ, ರಾತ್ರಿ ಮನೆಗೆ ಬಂದಾಗ ಆ ಗಿಳಿ ಯಾವಾಗಲೂ ಇವೊತ್ತು ಇವೊತ್ತು ಎಂದು ನೆನಪಿಸುತ್ತಿತ್ತಂತೆ.
ಸುಮಾರು ಆರು ತಿಂಗಳ ನಂತರ ಆ ವ್ಯಕ್ತಿ ಇನ್ನೊಂದು ಗಿಳಿಯನ್ನು ತಂದು “ನಾಳೆ” ಎಂದು ಹೇಳಲು ಆ ಕಲಿಸಿಕೊಟ್ಟನಂತೆ. ಬದುಕೆಂಬುದು ಇಂದು ಮಾತ್ರ, ಅದಕ್ಕೆ ನಾಳೆಗಳಿಲ್ಲ ಎಂದು ನಾನು ಬದುಕುತ್ತಿದ್ದೇನೆ, ಆದರೆ ಬದುಕೆಂಬುದು ಇಂದು ನಾಳೆಗಳ ವಾಸ್ತವ. ವರ್ತಮಾನ ಮತ್ತು ಭವಿಷತ್ ಕಾಲದ ಮೊತ್ತ. ಹೌದು ಆ ಎರಡು ಗಿಳಿಗಳು ಬದುಕೆಂಬುದು ಇಂದು ನಾಳೆಗಳ ವಾಸ್ತವ ಎಂದು ಅರಿತು ಬಾಳಲು ಅವನಿಗೆ ನೆರವಾದವಂತೆ.
“ಇಲ್ಲ ಸಾರ್ ಸೀಟ್ ಖಾಲಿ ಇದೆ. ಕೂತು ಕೊಳ್ಳಿ”
ರಾಜು ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಿತ್ತು. ಬಸ್ಸನ್ನು ಹತ್ತಿದ್ದಾಗ ಒಂದು ಸೀಟು ಖಾಲಿಯಿತ್ತು. ಕುಳಿತುಕೊಳ್ಳುವ ಮೊದಲು ಆ ಬಸ್ಸು ಯಾವ ಊರಿಗೆ ಹೋಗುತ್ತದೆ ಎಂಬುವುದನ್ನು ಖಾತ್ರಿ ಮಾಡಿಕೊಳ್ಳಲು, ಪಕ್ಕದ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕನನ್ನು ಉದ್ದೇಶಿಸಿ: ಈ ಬಸ್ಸು ಮೈಸೂರಿಗೆ ಹೋಗುತ್ತದೆಯೇ? ಎಂದು ಕೇಳಿದ. “ಇಲ್ಲ ಸಾರ್, ಸೀಟ್ ಖಾಲಿ ಇದೆ, ಕೂತು ಕೊಳ್ಳಿ” ಎಂದು ಉತ್ತರಿಸಿದ.!
No comments:
Post a Comment