Wednesday, 9 May 2018

ಮತ್ತೆ ಐದು ವರ್ಷಕ್ಕೆ ಬರುತ್ತೇವೆಂದು !!!


ಸುಖಾ ಸುಮ್ಮನೆ ಬೈದಾಡಿ ಬಿಟ್ಟೆ
ಈ ಎಲೆಕ್ಷನ್ ಯಾಕಾರು ಬರುತ್ತವೋ
ಅಲ್ಲಿರುವುದು ಬರಿಯ ಬಿಸಿಲು, 
ಸುರಿವ ಕೊಳೆ ಮೊಸರು..!
ಹಾರುವ ಕಾರುವ ವಿಷ ಸರ್ಪಗಳು
ಎರಚುವ ಅರಚುವ ಕತ್ತೆಕಿರುಬಗಳು 
ಹೂಳಿಡುವ ಗೊಳಾಡುವ ನರಿ ನಾಯಿಗಳು
ನರರ ನಾಡಿನಲ್ಲಿ ಹರಿದಾಡುವ ಕೊಳಚೆ ಕಾಲುವೆಗಳು
ನರನರರ ನಡುವೆ ನೆರೆತನ ಮರೆತ ಮತಾಂಧರು 
ಜಾತಿ ಜವರಾಯನ ಜೋಡಿ ಎತ್ತುಗಳು
ತೇರು ಹೊತ್ತ ಹೋರಿ ಹೋತಗಳು
ಧಿಕ್ಕಾರದ ದೆವ್ವಗಳು
ಧರ್ಮದ ಬಿಡಾರಗಳ ಹೊಕ್ಕಾವೋ ರಕ್ತಪಿಪಾಸುಗಳು
ಎಂದವರನ್ನು ಜರಿದಿದ್ದೆ 
ಕ್ಷಮಿಸಬೇಕು ದಮ್ಮಯ್ಯ 
ಪಾಪ ಇವರು ಒಳ್ಳೆಯವರು
ಅಷ್ಟು ಬೈದರೂ ಇಷ್ಟು ಕೋಪಗೊಳ್ಳದೆ
ಒಂದಷ್ಟು ನೋಟು ಮತ್ತಷ್ಟು ಸಾರಾಯಿ ಘಾಟು ಇಟ್ಟು
ನನ್ನ ಓಟನಷ್ಟೆ ಕೇಳಿ ಹೋದರು..!
ಮತ್ತೆ ಐದು ವರ್ಷಕ್ಕೆ ಬರುತ್ತೇವೆಂದು.

¨ ಸಂತೋಷ್ ಇಗ್ನೇಷಿಯಸ್ ಎಸ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...