Sunday, 12 May 2019

ಯೇಸುಸ್ವಾಮಿ ಎದ್ದು ಬಂದನೋ - ಎಫ್.ಎಂ.ನಂದಗಾವ್

ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ

ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ

||ಪಲ್ಲವಿ||

ಎದ್ದನೋ ಎದ್ದನೋ, ಸಮಾಧಿ ಬಿಟ್ಟು ಎದ್ದು ಬಂದನೋ

ಎದ್ದನೋ ಎದ್ದನೋ, ಯೇಸುಸ್ವಾಮಿ ಎದ್ದು ಬಂದನೋ

||ಪಲ್ಲವಿ||

ಬಿದ್ದನೋ ಬಿದ್ದನೋ, ಜವರಾಯನು ಬಿದ್ದು ಬಿಟ್ಟನೋ

ಬಿದ್ದನೋ ಬಿದ್ದನೋ, ಮಕಾಡೆಯಾಗಿ ಬಿದ್ದು ಬಿಟ್ಟನೋ

||ಪಲ್ಲವಿ||

ಗೆದ್ದನೋ ಗೆದ್ದನೋ, ಯೇಸುಸ್ವಾಮಿ ಗೆದ್ದು ಬಿಟ್ಟನೋ

ಗೆದ್ದನೋ ಗೆದ್ದನೋ ಜವರಾಯನನ್ನ ಗೆದ್ದು ಬಿಟ್ಟನೋ

||ಪಲ್ಲವಿ||

ಹುಟ್ಟು ಸಾವ ಮಧ್ಯದ ಕಿರಿಬಾಳಲಿ ಯೇಸುಸ್ವಾಮಿಯೋ

ನ್ಯಾಯ, ನೀತಿ, ಬದುಕ ಪ್ರೀತಿ, ಧರ್ಮವ ಕಲಿಸಿದನೋ |

|ಪಲ್ಲವಿ||

ನರರ ಬಣ್ಣಭಾವಗಳಲಿ, ಬೇಧವನು ಎಣಿಸಬೇಡಿರೋ

ಧರೆಯ ನರರೆಲ್ಲಾ, ಒಂದೇ ಜೀವ ಎಂದು ನುಡಿದನೋ

||ಪಲ್ಲವಿ||

ಸಗ್ಗದ ಸರ್ವೇಶ್ವರನ, ತಂದೆಯೇ ಎಂದು ಕರೆದನೋ

ಪಿತನ ಸುತನು, ಜನರೆಲ್ಲಾ, ಒಂದೆ ಮಂದೆ ಎಂದನೋ

||ಪಲ್ಲವಿ||

ದುಗ್ಗಾಣಿಗೆ ಗತಿಯಿಲ್ಲದ ಬಡವರು ಬಲ್ಲಿದರೆಂದನೋ

ನಾಕದ ಭಾರಿ ಬಾಗಿಲ ಅಗಳಿಯ ತೆರೆದು ಇರಿಸಿದನೋ

||ಪಲ್ಲವಿ||

ಸಿರಿವಂತರಿಗೋ, ಸಗ್ಗದ ಹೆಬ್ಬಾಗಿಲು ಸೂಜಿಯ ಕಣ್ಣೋ

ಬಡಬಗ್ಗರಿಗೋ, ನೀರುಕುಡಿದಂದದಿ ಸಲೀಸು ಎಂದನೋ

|ಪಲ್ಲವಿ||

ಬಡವಿಧವೆಯ ಪುಡಿಗಾಸು, ಹುಂಡಿ ತುಂಬುವ ಕನಕವೋ

ಊಟ ಮಾಡುವನಿಗಿಂತ ಬಡಿಸುವವ ಹೆಚ್ಚಾದವನೆಂದನೋ

||ಪಲ್ಲವಿ||

ವ್ಯಭಿಚಾರ, ಪರನಿಂದೆ, ನರಹತ್ಯೆ, ಕಳವು ಬೇಡವೆಂದನೋ

ತಂದೆತಾಯ ಗೌರವಿಸು, ಧನಕನಕ ಕೂಡಿಡಬೇಡ ಎಂದನೋ

||ಪಲ್ಲವಿ||

ಕಡೆಯಲಿ ಬಂದವರಲಿ, ಕೆಲವರು ಮೊದಲಿಗರಾಗುವರೋ

ಮೊದಲು ಬಂದವರಲಿ, ಕೆಲವರು ಕಡೆಯವರಾಗುವರೆಂದನೊ

||ಪಲ್ಲವಿ||

ಬೆಸ್ತರ, ಸುಂಕದವರ, ಸೂಳೆಯರನು ತನ್ನವರೆಂದನೊ,

ಅಂತ್ಯಜರು, ಅಸ್ಪೃಶ್ಯರು ಸರ್ವೇಶ್ವರನ ಮಕ್ಕಳೆಂದನೋ

||ಪಲ್ಲವಿ||

ಸಿದ್ಧಪ್ರವಾದಿಗಳ ಕಾಲಜ್ಞಾನ ಇತ್ತ ಭರವಸೆಯಂತೆಯೇ

ಪಿತನ ಒಡಂಬಡಿಕೆಯಂತೆಯೇ, ಧರೆಗಿಳಿದು ಬಂದನೋ

||ಪಲ್ಲವಿ||

ಬಂದ ಕಾಯಕದಂತೆ ನೊಂದವರ ನೋವ ಕಳೆದನೋ

ಸಂದ ಪಾಪ ಸಂಭಾವನೆಯ ಮರಣವ ಗೆದ್ದು ನಿಂತನೋ

||ಪಲ್ಲವಿ||

ಯೇಸುಸ್ವಾಮಿಯೊಂದಿಗೆ ನಾವು ಮರಣ ಹೊಂದಿದರೋ

ಜೀವಿಸುವೆವು ಸತತ ಸ್ವಾಮಿಯೊಂದಿಗೆ ವಿಶ್ವಾಸದಿಂದಲೋ

||ಪಲ್ಲವಿ||









No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...