ಡೇವಿಡ್ ಕುಮಾರ್. ಎ.
ಮತಗಟ್ಟೆಯ ಕಪ್ಪು ಮಸಿಯು
ಬೆರಳ ತುದಿಯ ನೆಕ್ಕಿದೆ
ಕನಸ ’ಗುಂಡಿ’ ಒತ್ತಿ ಬಂದ
ಭ್ರಮನಿರಸನ ನಗೆಯಲಿ
ನಿರಂಕುಶ ಕಪಿಮುಷ್ಠಿಯು
ಜನರ ಕೊರಳು ಹಿಸುಕಿದೆ
ಕೋಮು ವಿಷದ ಘಟಸರ್ಪವು
ಬೆರಳ ತುದಿಯ ಕಚ್ಚಿದೆ !
ಜನಾಧಿಕಾರ ಕೋಟೆಯೊಳಗೆ
ಸರ್ವಾಧಿಕಾರ ನುಸುಳಿದೆ
ಪ್ರಜಾತತ್ವ ಹೆಬ್ಬಾಗಿಲಿಗೆ
ಮಸಿಯ ರಾಶಿ ಸುರಿದಿದೆ
ಕೊರಳಿಗಿರದ ಸ್ವಾತಂತ್ರ್ಯವು
ಬೆರಳ ತುದಿಗೆ ಬರುವುದೇ ?
ಮರುಳು, ಮೋಡಿ ಕಾಡಿನಲಿ
ಉರುಳು ಬಿಗಿದ ನವಿಲುಗಳು !
No comments:
Post a Comment