Sunday, 12 May 2019

ಕಥಾದನಿ - ¨ ಇನ್ನಾ

ಪೀತಿ ಎಂಬ ಔಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..
ಜಗತ್ತಿನಲ್ಲಿ ತುಂಬಿ ತುಳುಕುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಔಷಧಿ ಎನು? ಶಿಷ್ಯ ಗುರುವನ್ನು ಕೇಳಿದ. “ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇರುವ ಒಂದೇ ಒಂದು ಔಷಧಿ ಎಂದರೆ ಪ್ರೀತಿ ಅಂದರೆ ಪ್ರೀತಿಸುವುದು” ಗುರು ಉತ್ತರಿಸಿದ. ಶಿಷ್ಯ ಗೊಂದಲಗೊಂಡ. ಪುನಃ ಕೇಳಿದ “ಈ ಪ್ರೀತಿಯು ಸಹ ಸಮಸ್ಯೆಗಳಿಗೆ ಪರಿಹಾರ ಕೊಡಲು ವಿಫಲವಾದರೇ?” ಗುರು ಸಮಾಧಾನದಿಂದ ಹೇಳಿದ “ ಪ್ರೀತಿ ಎಂಬ ಜೌಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..”

ನನ್ನನ್ನು ಸಹ ಒಳಹೊಗಲು ಅವರು ಬಿಡುತ್ತಿಲ್ಲ!
ಪಾಪಿಯೊಬ್ಬ ದೇವರಿಗೆ ದೂರು ಕೊಟ್ಟ “ ದೇವರೇ ನನ್ನನ್ನು ಜನರು ಬಹಿಷ್ಕರಿಸಿದ್ದಾರೆ ಚರ್ಚ್ ಒಳಗೆ ನನ್ನನ್ನು ಬಿಡುತ್ತಿಲ್ಲ…” ಪಾಪಿಯ ವೇದನೆಯನ್ನು ಆಲಿಸಿದ ದೇವರು “ಎಂತದು ನಿನ್ನ ದೂರು! ನನ್ನನ್ನು ಸಹ ಚರ್ಚ್ ಒಳಗೆ ಹೋಗಲು ಅವರು ಬಿಡುತ್ತಿಲ್ಲ!” ಎಂದು ದುಃಖದಿಂದ ನುಡಿದರಂತೆ.

ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ
ಹಂದಿ ಮತ್ತು ಹಸುವಿನ ನಡುವೆ ಒಂದು ಚರ್ಚೆ ಅರಂಭವಾಯಿತು. ಹಂದಿ ಹಸುಗೆ ಹೇಳಿತ್ತು “ನೀನು ಜನರಿಗೆ ಕೇವಲ ಹಾಲು ಮಾತ್ರ ಕೊಡ್ತೀಯ, ನಾನಾದರೊ ನನ್ನನ್ನೇ ಸಂಪೂರ್ಣವಾಗಿ ಅವರಿಗೆ ಕೊಡುತ್ತೀನಿ… ಕೊನೆಗೆ ನನ್ನ ಕರುಳನ್ನು ಸಹ ಅವರು ಬಿಡುವುದಿಲ್ಲ… ಆದರೂ ಜನರು ನಿನ್ನನ್ನೇ ಹೆಚ್ಚು ಗೌರವಿಸುತ್ತಾರಲ್ಲ ಅದು ಹೇಗೆ?”
ಆಗ ಹಸು ಹೇಳಿತು: “ನೀನು ಎಲ್ಲವನ್ನು ಕೊಡೋದು ನೀನು ಸತ್ತ ಮೇಲೆ.. ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ…ಅದಕ್ಕೆ ಜನರು ನಿನಗಿಂತ ನನ್ನನ್ನು ಹೆಚ್ಚಾಗಿ ಗೌರವಿಸುತ್ತಾರೆ”




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...