ದೇವರ ಹೆಸರ
ಹೇಳಲು ಒತ್ತಾಯಿಸಿ ನನ್ನ
ಹೊಡೆಯುವೆ ನೀನು ಕ್ರೂರದಿ
ಹೌದು, ಧರ್ಮಕ್ಕೆ ರಾಜಕೀಯ
ಸೊಂಕು ಬಡಿದಿರುವಾಗ
ದೇವರು ಎಂಬುವರು
ಯಾರು ಎಂದು ನಿನಗೆ
ತಿಳಿಹೇಳುವರಾರು?
————
ದ್ವೇಷದವಿರುದ್ಧ
ನಾ ಬರೆದ ಪತ್ರಕ್ಕೆ
ಪತ್ರ ಬರೆದು ನನ್ನ ವಿರೋಧಿಸಿದೆಯಲ್ಲ
ದ್ವೇಷವನ್ನು ದ್ವೇಷದಿಂದ
ಗೆಲ್ಲುವ ಸಿದ್ಧಾಂತ
ನಿನ್ನದಾದರೆ
ದ್ವೇಷವನ್ನು ದ್ವೇಷದಿಂದ ಗೆದ್ದು ತೋರಿಸು
——————
ರಾಜಕೀಯ ಆಟಕ್ಕೆ
ನಿಮ್ಮ ಆಧಿಕಾರದ ದುರಾಸೆಗೆ
ಬಲಿಯಾಗುವುದು ನೀವಲ್ಲ
ನಿಮ್ಮ ಕೈಗಳಿಗೆ ಆಟದ ಗೊಂಬೆಗಳಾಗಿರುವ
ನಾವುಗಳು
—————-
ಬೇವಿನ ಸೊಪ್ಪಿನಿಂದ
ಕಹಿ ಬಿಟ್ಟು
ಸಿಹಿ ಕೇಳುವುದು
ದುಷ್ಟ ಸರ್ಕಾರದಿಂದ
ಧರ್ಮ ಬಯಸಿದಂತೆ.
ಜೀವಸೆಲೆ
No comments:
Post a Comment