Wednesday, 7 August 2019

ಕವಿದನಿ

ಕಾಂಕ್ರಿಟ್ಟು
-ಡೇವಿಡ್ ಕುಮಾರ್. ಎ

  ಬಾಗಿಲಲಿ, ಹೊಸ್ತಿಲಲಿ
ಅಟ್ಟಿಯಲಿ, ಬೀದಿಯಲಿ
ರಸ್ತೆ, ರಹದಾರಿಯಲಿ
ಕಾಂಕ್ರಿಟ್ಟಿನ ಎಡವಟ್ಟು

ಅಂಬೆಗಾಲೂ ಅಂಗಲಾಚಿದೆ
ಮಣ್ಣಿನ ನುಣ್ಣನೆಯ ಮುತ್ತಿಗೆ
ಪಾದಗಳಿಗೂ ವಿರಹವಿದೆ
ಭೂ ಸ್ಪರ್ಶವ ನೆನೆದು

ಬರಗಾಲದ ಕಾಲುದಾರಿಯಿಲಿ
ಹಸುರಿನ ಅನುಪಸ್ಥಿತಿ,
ಕಾಂಕ್ರಿಟ್ಟಿನ ಅಂಗಳದಲಿ
ಬಿಕ್ಕಳಿಸುವುದು ರಂಗವಲ್ಲಿ !

`ಅಭಿವೃದ್ಧಿ' ಮಾಯಾ ಗಿರಣಿಯಲಿ
ಕಾಂಕ್ರಿಟ್ಟಿನ ರಾಶಿ ಹಿಟ್ಟು
ಜೀವರಾಶಿಗಳ ಸುಟ್ಟು
ಕಿವಿಯ ಮೇಲೆ ಹೂವಿಟ್ಟು !



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...