- ಇನ್ನಾ
ಟಿಕೇಟ್ ಕಳೆದುಕೊಂಡ ಮುಲ್ಲಾನಸ್ರುದ್ದೀನ್! ಒಮ್ಮೆ ಮುಲ್ಲಾನಸ್ರುದ್ದೀನ, ರೈಲುಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ,ಚೀಲಗಳಲ್ಲಿ ತನ್ನ ಟಿಕೇಟ್ನ್ನು ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆಮಾಡಿದ.
“ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ"
“ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟು ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿಬಿಡುತ್ತದಲ್ಲ"ಮುಲ್ಲಾ ಉತ್ತರಿಸಿದ.
———————
"That’s fine, but while you’re making a contribution I’m making a real commitment!”
ಕೋಳಿ ಮತ್ತು ಹಂದಿ ರೈತನೊಂದಿಗೆ ಜೀವಿಸುತ್ತಿದ್ದವು. ಅವರೆಡಕ್ಕೂ ರೈತನೆಂದರೆ ಪಂಚಪ್ರಾಣ. ಏಕೆಂದರೆ ರೈತನು ಅವುಗಳನ್ನು ತುಂಬ ಪ್ರೀತಿಸುತ್ತಿದ್ದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಒಂದು ದಿನ ಕೋಳಿಯು ಹಂದಿಯ ಬಳಿಗೆ ಬಂದು "ರೈತನು ನಮ್ಮನ್ನು ಎಷ್ಟೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಅಲ್ವಾ; ಅವನಿಗೆ ನಾವೆಂದ್ರೆ ಪಂಚಪ್ರಾಣ, ಅವನಿಗೆ ನಾವೇನಾದರೂ ಕೊಡಬೇಕು" ಎಂದು ಹೇಳಿತ್ತು. ಹಂದಿ ಪ್ರತ್ಯತ್ತರವಾಗಿ "ಹೌದೌದು, ರೈತ ನಮ್ಮನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾನೆ, ನೀನು ಹೇಳಿದ ಹಾಗೆ, ಅವನ ಪ್ರೀತಿಗೆ ಪ್ರತಿಯಾಗಿ ನಾವು ಎನಾದರೂ ಕೊಡಲೇಬೇಕು ,, ಆದರೆ ಏನು ಕೊಡುವುದು?" ಎಂದು ಹಂದಿಯು ಕೋಳಿಯನ್ನು ಕೇಳಿತ್ತು.
ಕೋಳಿಯು ಸ್ವಲ್ಪ ಹೊತ್ತು ಯೋಚಿಸಿ. ನಮ್ಮ ಯಜಮಾನಿಗೆ ಬೆಳಗಿನ ಉಪಹಾರವೆಂದರೆ ತುಂಬಾ ಇಷ್ಟ. ಅದನ್ನು ತುಂಬಾ ಆನಂದಿಸುತ್ತಾನೆ. ಅದಕ್ಕಾಗಿ ನಾನು ನನ್ನ ಕೆಲವು ಮೊಟ್ಟೆಗಳನ್ನು ಕೊಡುತ್ತೇನೆ. ಆದರೆ ಮೊಟ್ಟೆಗಳಿಂತ ಹ್ಯಾಮ್ (ಹಂದಿ ಮಾಂಸದಿಂದ ತಯಾರಿಸಿದ ಪದಾರ್ಥ) ಅಂದ್ರೆ ರೈತನಿಂದ ತುಂಬಾ ಇಷ್ಟ.ಅದಕ್ಕಾಗಿ ನೀನು ರೈತನಿಗೆ ಹ್ಯಾಮ್ ಕೊಡು ಎಂದು ಹೇಳುತ್ತಿದಂತೆ, ಹಂದಿ ಯೋಚಿಸಿ ಹೇಳಿತಂತೆ ""that’s fine, but while you’re making a contribution I’m making a real commitment!”
———————————-
ಅವಳು ನನ್ನನ್ನು ಗುರುತಿಸದೆ ಇರಬಹುದು. ಆದರೆ ನಾನು ಅವಳನ್ನು ಗುರುತಿಸುತ್ತೀನಲ್ಲ
ಅರುಳುಮರಳು ಕಾಯಿಲೆ ಅಂತಿಮ ಹಂತದಲ್ಲಿರುವ ತನ್ನ ಹೆಂಡತಿಯನ್ನು ಸಮರ್ಪಕವಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಗಂಡನಿಗೆ ತಿಳಿದಿತ್ತು. ಆದರೂ ಅವನು ಅವಳಿಗೆ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳ ಏರ್ಪಾಡು ಮಾಡಿದ್ದ ಮತ್ತು ಪ್ರತಿದಿನ ಅವಳನ್ನು ಸರಿಯಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಭೇಟಿ ಮಾಡುತ್ತಿದ್ದ.
ಒಂದು ದಿನ ಅವನಿಗೆ ರಸ್ತೆಯಲ್ಲಿ ಸಣ್ಣ ಅಪಘಾತವಾಗಿ ಆಸ್ಪತ್ರೆಗೆ ಸೇರಿಸಲಾಯಿತ್ತು. ಪ್ರಜ್ಞೆ ಬಂದು ತುರ್ತುಕೋಣೆಯಲ್ಲಿರುವ ವಾಸ್ತವ ಅವನಿಗೆ ತಿಳಿಯಿತ್ತು. ಮಧ್ಯಾಹ್ನ ಊಟದ ಸಮಯ ಸಮೀಪಿಸುತ್ತಿದ್ದಂತೆ ಅವನಲ್ಲಿ ಚಡಪಡಿಕೆ ಪ್ರಾರಂಭವಾಯಿತ್ತು, ಅವನ ತೋಳ ಗಾಯಕ್ಕೆ ಹೊಲಿಗೆ ಹಾಕಲು ದಾದಿಯೊಬ್ಬರು ಬಂದಾಗ, "ನಾನು ಹೊರಡಬೇಕು," ಅವನು ಜೋರಾಗಿ ಹೇಳಿದ. "ನಿಮ್ಮ ಗಾಯಗಳಿಗೆ ಇನ್ನೂ ಜೌಷದಿ ಹಾಕಬೇಕು.treatment ಇನ್ನೂ ಮುಗಿದಿಲ್ಲ" ಎಂದು ಅವಳು ಅವನಿಗೆ ಹೇಳಿದಳು. "ಆದರೆ ನಾನು ಮಧ್ಯಾಹ್ನ ನನ್ನ ಹೆಂಡತಿಯನ್ನು ಭೇಟಿ ಮಾಡಬೇಕು" ಎಂದು ಅವನು ಹೇಳಿದ. "ಸರಿ" ಎಂದ ಅವಳು ನಿಧಾನವಾಗಿ ಅವನಿಗೆ, "ಕ್ಷಮಿಸಿ, ಇಂದು ಸ್ವಲ್ಪ ತಡವಾಗಬಹುದು."ಎಂದು ಹೇಳಿದಳು.
ಆ ವ್ಯಕ್ತಿ ತನ್ನ ಹೆಂಡತಿಗಿರುವ ಕಾಯಿಲೆ ಕಥೆಯನ್ನು ದಾದಿಗೆ ಸವಿಸ್ತಾರವಾಗಿ ಹೇಳಿದ. ಜತೆಗೆ ಅವನು ಪ್ರತಿ ಮಧ್ಯಾಹ್ನ ಹೆಂಡತಿಯನ್ನು ಕಾಣಲು ಹೋದಾಗ, "ಅವಳು ನನ್ನನ್ನು ಗುರುತೇ ಹಚ್ಚುವುದಿಲ್ಲ, ನಾನು ಯಾರೆಂದು ಸಹ ಅವಳಿಗೆ ತಿಳಿಯುವುದಿಲ್ಲ" ಎಂದು ಹೇಳುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ, "ನೀವು ಯಾರೆಂದು ಗುರುತಿಸಲಾಗದ ಹೆಂಡತಿಯ ಬಗ್ಗೆ ಏಕೆ ಅಷ್ಟೂ ತಲೆ ಕೆಡಿಸಿಕೊಳ್ಳುತ್ತೀರಾ. ಇವತ್ತು ಅವಳನ್ನು ನೋಡಲು ಸ್ವಲ್ಪ ತಡ ಮಾಡಿ ಹೋದ್ರು, ಏನು ಆಗಲ್ಲ..ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ" ಎಂದು ಹೇಳುತ್ತಿದಂತೆ, "ಇಲ್ಲ ನಾನು ಹೋಗಲೇ ಬೇಕು. ಅವಳು ನನ್ನನ್ನು ಗುರಿತಿಸದೆ ಇರಬಹುದು. ಆದರೆ ನಾನು ಅವಳನ್ನು ಗುರುತ್ತಿಸುತ್ತೀನಲ್ಲ" ಎಂದು ಹಾಸಿಗೆ ಬಿಟ್ಟು ಹೊರನಡೆದನಂತೆ.
No comments:
Post a Comment