Friday, 6 September 2019

ಮೂಲ ಜಾಡನು ಹುಡುಕಿ

ಝರಿಯು ಉಕ್ಕಿ ಹರಿದಿದೆ

ಮಣ್ಣ ಮೈಯ ಕುಕ್ಕಿದೆ

ಮೂಲ ಜಾಡ ಹುಡುಕಿದೆ



ತೊರೆಯು ಮೊರೆದು ಉಬ್ಬಿದೆ

ಅತಿಕ್ರಮಣದ ಗಾಯಕೆ

ಮತಿಭ್ರಮಣೆಯ ಆಟಕೆ



ಕೆರೆಯು ತುಂಬಿ ತುಳುಕಿದೆ

ಹೊಟ್ಟೆಯೊಳಗೆ ಹೂಳಿದೆ

ಆಸು-ಪಾಸು ವಿಷವಿದೆ



ಹೊಳೆಯ ರಭಸ ಹೆಚ್ಚಿದೆ

ಕೊಳೆಯ ಕೊಚ್ಚಿ ತಂದಿದೆ

ಮಳೆಯ ರುದ್ರ ಕುಣಿತಕೆ



ಕಡಲ ಒಡಲು ಸಿಡಿದಿದೆ

ಒಳಗೊಳಗೆ ಕುದಿಯಿದೆ

ಅಂತ್ಯ ನಿಗಧಿಯಾಗಿದೆ



¨ ಡೇವಿಡ್ ಕುಮಾರ್. ಎ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...