ಪಾದ್ವದ ಪರಿಮಳವೇ,
ಹಲಸೂರಿನ ಮಣ್ಣಿನಲ್ಲಿದೆ.
ಈ ಮಣ್ಣ ಪ್ರತಿಕಣಕಣದಲ್ಲೂ
ಆ ಸಂತನ ವರದಾನವಿದೆ!
ಹಲಸೂರಿನ ಮಣ್ಣಿನಲ್ಲಿದೆ.
ಈ ಮಣ್ಣ ಪ್ರತಿಕಣಕಣದಲ್ಲೂ
ಆ ಸಂತನ ವರದಾನವಿದೆ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ನದಿಯಾಳದ ಮೀನಿಗೂ,
ಬುದ್ಧಿ ಮರೆತ ಪ್ರಾಣಿಗೂ,
ಜೀವವಾಣಿ ಕೇಳಿಸಿದ ಸಂತ.
ಹುಲುಮಾನವನೆದೆಯಲ್ಲಿ,
ಪರಮಾತ್ಮನ ಮೂಡಿಸಲು,
ಈ ಬೆಟ್ಟದ ಬಯಲಲ್ಲಿ ನಿಂತ!
ಬುದ್ಧಿ ಮರೆತ ಪ್ರಾಣಿಗೂ,
ಜೀವವಾಣಿ ಕೇಳಿಸಿದ ಸಂತ.
ಹುಲುಮಾನವನೆದೆಯಲ್ಲಿ,
ಪರಮಾತ್ಮನ ಮೂಡಿಸಲು,
ಈ ಬೆಟ್ಟದ ಬಯಲಲ್ಲಿ ನಿಂತ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ದೂರದೂರಿಗೊಯ್ದರೂ,
ಮರಳಿ ಬಂದು ನಿಂತನು,
ಕಾಲ ದೇಶ ಮೀರಿದಂಥ ಸಂತ!
ನಂಬಿ ಬಂದ ಕಂಗಳಲಿ,
ಒಣಮರದ ರೆಂಬೆಗಳಲಿ,
ತಂದೇ ತರುವನಯ್ಯಾ ವಸಂತ!
ಮರಳಿ ಬಂದು ನಿಂತನು,
ಕಾಲ ದೇಶ ಮೀರಿದಂಥ ಸಂತ!
ನಂಬಿ ಬಂದ ಕಂಗಳಲಿ,
ಒಣಮರದ ರೆಂಬೆಗಳಲಿ,
ತಂದೇ ತರುವನಯ್ಯಾ ವಸಂತ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
(ಬೆಟ್ಟದ ಹಲಸೂರಿನ ಅಂತೋಣಪ್ಪನನ್ನು ನೆನೆದು. . . . )
¨ ಯಜಮಾನ್ ಫ್ರಾನ್ಸಿಸ್
No comments:
Post a Comment