Monday, 23 April 2018

ಕಥಾದನಿ


ಒಮ್ಮೊಮ್ಮೆ ಹಾಗಾಗುತ್ತದೆ!
ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ "ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ. ಆಗ ಗುರು " ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ. ಸ್ವಲ್ಪ ದಿನಗಳ ನಂತರ ಶಿಷ್ಯನು ಮತ್ತೆ ಗುರುವಿನ ಬಳಿ ಹೋಗಿ
"
ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ" ಎಂದು ಹೇಳುತ್ತಾನೆ. ಆಗ ಗುರುವು " ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವುದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ .
ಹೋಗು ಸುಮ್ಮನೆ ಮಲಗು
ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ. ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ದೇಗುಲವನ್ನು ಪುನರ್ನಿರ್ಮಾಣ ಮಾಡುವುದರಲ್ಲಿ ನಿರತನಾಗಿದ್ದ. ಟೆಕಿಸ್ಯು ಅವನನ್ನು ಕೇಳಿದ; 'ಗುಡಿ ಪುನರ್ನಿರ್ಮಾಣವಾದ ನ೦ತರ ನೀನೇನು ಮಾಡುವೆ?' 'ನೀವು ಗುಣಮುಖವಾದ ಮೇಲೆ ಅಲ್ಲಿ ನೀವು ಉಪದೇಶಿಸಬೇಕು. ' ಗಾಸನ್ ಹೇಳಿದ 'ಒ೦ದು ವೇಳೆ ಅಲ್ಲಿಯವರೆಗೂ ನಾನು ಬದುಕಿರದಿದ್ದರೆ?' 'ಆಗ ಬೇರೆ ಇನ್ನೊಬ್ಬರನ್ನು ಕರೆತರುತ್ತೇವೆ. ' 'ಒ೦ದು ವೇಳೆ ನಿನಗೆ ಯಾರೂ ಸಿಗದಿದ್ದರೆ?' ಗಾಸನ್ ಗಟ್ಟಿಯಾಗಿ ಉತ್ತರಿಸಿದ, 'ಅ೦ಥಾ ಮೂರ್ಖ ಪ್ರಶ್ನೆಗಳನ್ನು ಹಾಕಬೇಡ. ಹೋಗು ಸುಮ್ಮನೆ ಮಲಗು. . . . '
ಕೂಗಿ ಹೇಳಿದ, ' ಲಾಟೀನನ್ನು ನೀನು ನೋಡಲಿಲ್ಲವಾ?
'ಸಹೋದರನೇ, ನಿನ್ನ ಲಾಟೀನ್ ಆರಿ ಹೋಗಿದೆ!' ಶಾ೦ತನಾಗಿ ಮರುತ್ತರಿಸಿದ ಅಪರಿಚಿತ.
ಸಂಗ್ರಹ - ಇನ್ನಾ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...