ಅವನು ಕೆಲಸದವನು
ಹಾಕಿದ ಊಟ ಹೇಳಿದ ಕೆಲಸ
ಎದೆಗಾರಿಕೆಗೆ ಹೆಸರಾದವನು
ತೆರೆದೆದೆಗೆ ಗುರಿ ಇಟ್ಟವನು
ಹೊಕ್ಕ ಗುಂಡು
ಗುಂಡಿಗೆಯ ಛಿದ್ರಗೊಳಿಸಿತು ನರನಾಡಿಗಳ
ಈಡೇರದ ಕನಸುಗಳ
ಮುದಿಜೀವದ ಕೊನೆಯ ಆಸೆ ಏನೆಂದು
ಕೇಳದ ಗೋಜಿಗೆ ಬಯಲು ನಿಶ್ಯಬ್ದ
ಅದನ್ನೇ ಮತ್ತೆ ಮತ್ತೆ ರುಜುವಾತುಪಡಿಸಲೇ....?
ಮೇದಿನಿಯ ಮೇರೆ ಮೀರಿ
ಸೂರ್ಯ ಚಂದ್ರ ಗ್ರಹತಾರೆ ಲೋಕವ
ಕರೆದು ಕೂಗಲಿಲ್ಲ
ನಾ ನಾಯಕನೆಂದು
ದೇವರ ರಾಜ್ಯವ ಏರಿ ಹೋಗಿ
ವಿಜಯಪತಾಕೆ ಹಾರಿಸ ಹೊರಟ
ದಂಗೆಕೋರ ನಾನಲ್ಲ ಎಂದು
ಅಪಮಾನಿತರ ಕೊರಳ ಧ್ವನಿಯಾಗಿ
ಅನಾಥನ ಕೊಳಲನಾದದ ಶ್ರುತಿಯಾಗಿ
ಅಮಾಯಕ ಹೂವಿನ ಮಕರಂದವಾಗಿ
ಸತ್ಯದ ದಾರಿಯಲ್ಲಿ
ನ್ಯಾಯದ ನೇರದಲ್ಲಿ
ನೀರವ ಮೌನದಲ್ಲಿ
ಅರೆಬೆತ್ತಲ ಫಕೀರ ನಾನೆಂದು
ಕೆಲಸದವನಿಗೇನು ತಿಳಿಯಬೇಕು?
ನಾನು ಇನ್ನೆಂದೂ ಸವಕಲು ನಾಣ್ಯವೆಂದು
`ಗಾಂಧೀ ಮುರ್ದಾಬಾದ್’ ಕೂಗು ಮುಗಿಲು ಮುಟ್ಟಿದೆಂದು
ತಿದ್ದಲಾಗದ ಇತಿಹಾಸದ ತಪ್ಪಿಗೆ
ಮತ್ತು ನನ್ನ ಹೆಸರಿಗೆ
ಕ್ಷಮೆ ನೀಡಲಾಗದೆಂದು
ನನ್ನ ಸಾವ ನಾನೇ ಬಯಸಿದ್ದೆಂದು
ಕೋವಿಯ ಚಾಪನ್ನು ಎಳೆದ
ಅಚ್ಚ ಬಿಳಿಯ ಕೈ ಬೆರಳಿಗೆ ತಿಳಿದಿತ್ತು
ಅರ್ಧನಾರೀಶ್ವರನ ಕೊರಳ
ಉರುಳು ನಾನೆಂದು
ಮಹಾತ್ಮನ ಕೊಂದ ತಾನು ಹುತಾತ್ಮನೆಂದು
ಚರಿತ್ರೆಯಲ್ಲಿ ಮಹಾಸಾಧಕನೆಂದು
- ಡಾ. ದಿನೇಶ್ ನಾಯಕ್
ಹಾಕಿದ ಊಟ ಹೇಳಿದ ಕೆಲಸ
ಎದೆಗಾರಿಕೆಗೆ ಹೆಸರಾದವನು
ತೆರೆದೆದೆಗೆ ಗುರಿ ಇಟ್ಟವನು
ಹೊಕ್ಕ ಗುಂಡು
ಗುಂಡಿಗೆಯ ಛಿದ್ರಗೊಳಿಸಿತು ನರನಾಡಿಗಳ
ಈಡೇರದ ಕನಸುಗಳ
ಮುದಿಜೀವದ ಕೊನೆಯ ಆಸೆ ಏನೆಂದು
ಕೇಳದ ಗೋಜಿಗೆ ಬಯಲು ನಿಶ್ಯಬ್ದ
ಅದನ್ನೇ ಮತ್ತೆ ಮತ್ತೆ ರುಜುವಾತುಪಡಿಸಲೇ....?
ಮೇದಿನಿಯ ಮೇರೆ ಮೀರಿ
ಸೂರ್ಯ ಚಂದ್ರ ಗ್ರಹತಾರೆ ಲೋಕವ
ಕರೆದು ಕೂಗಲಿಲ್ಲ
ನಾ ನಾಯಕನೆಂದು
ದೇವರ ರಾಜ್ಯವ ಏರಿ ಹೋಗಿ
ವಿಜಯಪತಾಕೆ ಹಾರಿಸ ಹೊರಟ
ದಂಗೆಕೋರ ನಾನಲ್ಲ ಎಂದು
ಅಪಮಾನಿತರ ಕೊರಳ ಧ್ವನಿಯಾಗಿ
ಅನಾಥನ ಕೊಳಲನಾದದ ಶ್ರುತಿಯಾಗಿ
ಅಮಾಯಕ ಹೂವಿನ ಮಕರಂದವಾಗಿ
ಸತ್ಯದ ದಾರಿಯಲ್ಲಿ
ನ್ಯಾಯದ ನೇರದಲ್ಲಿ
ನೀರವ ಮೌನದಲ್ಲಿ
ಅರೆಬೆತ್ತಲ ಫಕೀರ ನಾನೆಂದು
ಕೆಲಸದವನಿಗೇನು ತಿಳಿಯಬೇಕು?
ನಾನು ಇನ್ನೆಂದೂ ಸವಕಲು ನಾಣ್ಯವೆಂದು
`ಗಾಂಧೀ ಮುರ್ದಾಬಾದ್’ ಕೂಗು ಮುಗಿಲು ಮುಟ್ಟಿದೆಂದು
ತಿದ್ದಲಾಗದ ಇತಿಹಾಸದ ತಪ್ಪಿಗೆ
ಮತ್ತು ನನ್ನ ಹೆಸರಿಗೆ
ಕ್ಷಮೆ ನೀಡಲಾಗದೆಂದು
ನನ್ನ ಸಾವ ನಾನೇ ಬಯಸಿದ್ದೆಂದು
ಕೋವಿಯ ಚಾಪನ್ನು ಎಳೆದ
ಅಚ್ಚ ಬಿಳಿಯ ಕೈ ಬೆರಳಿಗೆ ತಿಳಿದಿತ್ತು
ಅರ್ಧನಾರೀಶ್ವರನ ಕೊರಳ
ಉರುಳು ನಾನೆಂದು
ಮಹಾತ್ಮನ ಕೊಂದ ತಾನು ಹುತಾತ್ಮನೆಂದು
ಚರಿತ್ರೆಯಲ್ಲಿ ಮಹಾಸಾಧಕನೆಂದು
- ಡಾ. ದಿನೇಶ್ ನಾಯಕ್
No comments:
Post a Comment