Friday, 13 March 2020

ಕಥಾದನಿ

ಅವಲಂಬಿತರಾಗುವಂತಹ ಪ್ರವೃತ್ತಿಯನ್ನು ನಿವಾರಿಸುವುದು 
ಪ್ರಾರ್ಥನೆಯಲ್ಲೇ ಸದಾ ಮಗ್ನನಾಗಿರುತ್ತಿದ್ದ ಶಿಷ್ಯನಿಗೆ ಗುರುಗಳು ಹೀಗೆ ಹೇಳುತ್ತಾರೆ
“ದೇವರ ಮೇಲೆ ಯಾವಗಲ್ಲೂ ಆವಲಂಬಿತನಾಗಿರ್ತಿಯಲ್ಲ, ಯಾವಾಗ ನೀನು ನಿನ್ನ ಸ್ವಂತ ಕಾಲುಗಳ ಮೇಲೆ ನಿಲ್ಲುತ್ಯಾ?
ಗುರುಗಳ ಮಾತುಗಳನ್ನು ಕೇಳಿದ ಶಿಷ್ಯನು ಆಶ್ಚರ್ಯಗೊಂಡು
“ಆದರೆ ದೇವರನ್ನು ತಂದೆಯಂತೆ ಪರಿಭಾವಿಸಬೇಕೆಂದು ನೀವೇ ಹೇಳಿದ್ದೀರಿ!”
“ಹೌದು ತಂದೆಯೆಂದರೆ ತನ್ನವರನ್ನು ಯಾವಾಗಲ್ಲೂ ತನ್ನ ಮೇಲೆ  ಸಂಪೂರ್ಣವಾಗಿ ಅವಲಂಬಿತವಾಗಿರುವಂತೆ ಮಾಡುವುದಲ್ಲ, ತನ್ನವರು ಅವಲಂಬಿತರಾಗುವಂತಹ ಪ್ರವೃತ್ತಿಯನ್ನು ನಿವಾರಿಸುವುದು ಎಂಬ ಸತ್ಯವನ್ನು ಯಾವಾಗ ಕಲಿಯುತ್ತೀರಿ?” ಎಂದು ಗುರುಗಳು ಶಿಷ್ಯನಿಗೆ ಉತ್ತರಿಸಿದರು.
---------------------
ನೀನು ಯಾರನ್ನೂ ಹಿಂಬಾಲಿಸುವುದು ಬೇಡ
“ನಾನು ನಿಮ್ಮನ್ನು ಹಿಂಬಾಲಿಸಲು ಬಂದಿದ್ದೇನೆ” ಗುರುಗಳು ಹಿಂಬಾಲಿಸಲು ಬಂದವನ್ನು ಹೇಳಿದ. ಅದಕ್ಕೆ ಗುರುಗಳು
“ನೀನು ನನ್ನ ಜೊತೆ ಇರಬಹುದು ಆದರೆ ನನ್ನ ಹಿಂಬಾಲಕನಾಗುವುದು ಬೇಡ”  ಎಂದು ಹೇಳಿದರು.
“ಮತ್ತೇ ನಾನು ಯಾರನ್ನು ಹಿಂಬಾಲಿಸಲಿ?” ವ್ಯಕ್ತಿ ಗುರುಗಳನ್ನು ಪ್ರಶ್ನಿಸಿದ
ಅದಕ್ಕೆ ಗುರುಗಳು “ ನೀನು ಯಾರನ್ನೂ ಹಿಂಬಾಲಿಸುವುದು ಬೇಡ. ಯಾವಾಗ ನೀನು ಇನ್ನೊಬ್ಬರನ್ನು ಹಿಂಬಾಲಿಸಲು ಆರಂಭಿಸುವೆಯೋ ಆ ಕ್ಷಣವೇ ನೀನು ಸತ್ಯವನ್ನು ಹಿಂಬಾಲಿಸುವುದನ್ನು ಬಿಟ್ಟು ಬಿಡುವೆ” ಎಂದು ಹೇಳಿ ಮೌನಕ್ಕೆ ಜಾರಿದರು.
---------------------
ಮಾತುಗಳ ನಡುವಿನ ಮೌನವನ್ನು ಆಲಿಸು
ದೇವರ ಬಗೆಗಿನ ನಮ್ಮ ಮಾತುಗಳು, ಪ್ರತಿಮೆಗಳು ಎಲ್ಲವೂ ದೇವರ ಬಗ್ಗೆ ವಿವರಿಸುವುದಕ್ಕಿಂತ ವಿರೂಪಗೊಳ್ಳಿಸುವುದೇ ಹೆಚ್ಚು” ಎಂದು ಗುರುಗಳು ಶಿಷ್ಯರಿಗೆ ಹೇಳುತ್ತಿದಂತೆ, ಒಬ್ಬ ಶಿಷ್ಯನು ಗುರುವನ್ನು ಕೇಳುತ್ತಾನೆ “ ಹಾಗದರೆ ದೇವರ ಬಗ್ಗೆ ನಾವು ಮಾತನಾಡುವುದಾದರೂ ಹೇಗೆ?
ಗುರುಗಳು ಪ್ರತ್ಯುತ್ತರವಾಗಿ “ ಮೌನದ ಮೂಲಕ” ಎಂದು ಹೇಳುತ್ತಿದಂತೆ
“ಹಾಗದರೆ ನೀವೇಕೆ ದೇವರ ಬಗ್ಗೆ ಮಾತನಾಡುತ್ತೀರಿ?”
ಮತ್ತೊಮ್ಮೆ ಪ್ರಶ್ನೆ ಮಾಡಿದ ಶಿಷ್ಯನಿಗೆ ಗುರುಗಳು ಹೇಳುತ್ತಾರೆ
“ನಾನು ಮಾತನಾಡುವಾಗ ನೀನು ನನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಡ, ಮಾತುಗಳ ನಡುವಿನ ಮೌನವನ್ನು  ಆಲಿಸು”
-------------------------
ಇನ್ನಾ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...