Monday, 8 April 2019

ಚುನಾವಣೆ - ಡೇವಿಡ್ ಕುಮಾರ್ .ಎ.




ಖಾಲಿ ಹೊಟ್ಟೆಯ ಮತ ಪೆಟ್ಟಿಗೆಗಳು
ಸಾಲು ಸಾಲಲಿನಿಂತಿವೆ
ಮತ್ತೊಮ್ಮೆ ಬಸುರಾಗಲು
ಹೊಸ ನಾಯಕನ ಹಡೆಯಲು !

ದಂಡು ದಂಡಲಿ ದೌಡಾಯಿಸಿವೆ
ಅಭ್ಯರ್ಥಿ ಕುದುರೆಗಳು
ದಾರಿ ಇಲ್ಲದ ದೇಶದಲಿ
ನಾ ಮುಂದು ತಾ ಮುಂದು !

ಪಕ್ಷಗಳ ಚಿಹ್ನೆಗಳು
ಮಿರಮಿರನೆ ಮಿಂಚಿವೆ
ನಿರೀಕ್ಷೆಯ ನೀಲಾಕಾಶದಿ
ಕುಸುಮಗಳ ಅರಳಿಸಿ

ಮತದಾರ ಪ್ರಭುಗಳೇ...
ನಿಮ್ಮೆದೆಯ ಗುಂಡಿಯ ಒತ್ತಿ
ಗುಂಡು ತುಂಡುಗಳ ಧಿಕ್ಕರಿಸಿ
ಮನೆ ಹಿತ್ತಿಲ ಕುಂಬಳ ಬಳ್ಳಿಯಲೂ
ಹುಟ್ಟಿ ಬರಲಿಹೊಸ ಸೂರ್ಯ !

————



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...