Friday, 5 April 2019

ಕಥಾದನಿ - ಇನ್ನಾ

ಕವಿಯೊಬ್ಬ ಗುರುವಿನ ಬಗ್ಗೆ ಪುಸ್ತಕವೊಂದನ್ನು ಬರೆಯಲು ಮಠಕ್ಕೆ ಬಂದು 'ನೀವು ಮಹಾಜ್ಞಾನಿ, ಪ್ರತಿಭಾವಂತರೆಂದು ಜನ ಅಂದುಕೊಳ್ಳುತ್ತಾರೆ. 'ನೀವು ಮಹಾಜ್ಞಾನಿಯೇ?' ಎಂದು ಕೇಳುತ್ತಾನೆ. 

‘ನೀನೂ ಹಾಗೆ ಭಾವಿಸಬಹುದು' ಎಂದು ನಸುನಗುತ್ತಾ ನುಡಿಯುತ್ತಾರೆ ಗುರು. 

‘ಮತ್ತೆ ಒಬ್ಬ ಮಹಾಜ್ಞಾನಿ, ಹೇಗಾಗುತ್ತಾನೆ’ ಎಂಬುದು ಬರಹಗಾರನ ಸಂದೇಹ. 

’ಕಾಣುವ ಸಾಮರ್ಥ್ಯ ಹೊಂದಿದ್ದರೆ ಸಾಕು' ಎಂದುತ್ತರಿಸುತ್ತಾರೆ ಗುರು. 

ಕವಿಗೆ ಗೊಂದಲವಾಗುತ್ತದೆ. ತಲೆ ಕೆರೆದುಕೊಳ್ಳುತ್ತಾ ಅವನಂದುಕೊಳ್ಳುತ್ತಾನೆ 'ಕಾಣುವುದಾದರೂ ಏನನ್ನು?' 

ಆಗ ಗುರು ಸಾವಕಾಶವಾಗಿ ಅಷ್ಟೇ ಸ್ಪಷ್ಟವಾಗಿ 'ಹುಳುವಿನೊಳಗಿನ ಚಿಟ್ಟೆಯನ್ನು, ಮೊಟ್ಟೆಯೊಳಗಿನ ಗಿಡುಗವನ್ನು, ಸ್ವಾರ್ಥಿ ಮನದೊಳಗಿನ ಸಂತನನ್ನು, ಸಾವಿನೊಳಗಿನ ಜೀವವನ್ನು, ಬೇರ್ಪಟ್ಟವುಗಳಲ್ಲಿ ಒಗ್ಗಟ್ಟನ್ನು, ದೈವತ್ವದೊಳಗೆ ಮಾನವತ್ವವನ್ನು ಮತ್ತು ಮನುಷ್ಯನೊಳಗಿನ ದೈವತ್ವವನ್ನು ಕಾಣಬೇಕು' ಎನ್ನುತ್ತಾರೆ. 

ಆಚೆನ್ ಬಿಷಪರಾದ ಕ್ಲಾಸ್ ಹೆಮೆರ್ಲೆಯವರು ತಾವು ಸಾಯುವ ಸಮಯ ಸನ್ನಿಹಿತವಾದಾಗ ಉತ್ಥಾನಕಾಲದ ಪರಿಪತ್ರ (ಈಸ್ಟರ್ ಲೆಟರ್)ವನ್ನು ಬರೆಯುತ್ತಾ 'I wish each of us Easter eyes: ಸಾವಿನಲ್ಲಿ ಬದುಕ ಕಾಣೋಣ, ತಪ್ಪಿನಲ್ಲಿ ಕ್ಷಮೆ ಕಾಣೋಣ, ಒಡೆದು ಹೋದವು ಒಂದಾಗುವುದ ಕಾಣೋಣ, ಪರಿತಾಪದಲ್ಲಿ ಜಯವನ್ನು ಕಾಣೋಣ, ಮನುಜರಲ್ಲಿ ದೇವರ ಕಾಣೋಣ, ದೇವರಲ್ಲಿ ಮನುಷ್ಯನನ್ನು ಕಾಣೋಣ ಹಾಗೆಯೇ ನಾನು ಎಂಬಲ್ಲಿ ನೀವು ಎಂಬುದ ಕಾಣೋಣ' 

ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ 

ಜಪಾನಿನಲ್ಲಿ ಅಣುವಿನ ವಿಕಿರಣ ಎಲ್ಲರನ್ನೂ ತತ್ತರಿಸಿಬಿಟ್ಟಿತು. ಆದರೆ ಇಂದು ಬಹುಪಾಲು ಜಪಾನಿಯರಿಗೆ ನೆನಪಿರುವುದು, ಅಲ್ಲಿನ ಸಾವಲ್ಲ. ಪುನರುತ್ಥಾನ. ಒಬ್ಬ ಜಪಾನಿ ಹೇಳಿದ್ದ, "ನಾವು ಸಾವು ನೋವಿನ ಬಗ್ಗೆ ಯೋಚಿಸುತ್ತಿಲ್ಲ, ಮತ್ತೆ ಪುನರುತ್ಥಾನಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ". ಜಪಾನಿಯರು ಪುನರುತ್ಥಾನದ ಬಗ್ಗೆ ಯೋಚಿಸುವುದು ಇದೇ ಮೊದಲಲ್ಲ. 1948ರಲ್ಲಿ ಅಣುಬಾಂಬಿನ ವಿನಾಶದ ಧೂಳನ್ನು ಕೊಡವಿ ಮತ್ತೆ ಎದ್ದುಬಂದರು.ಕೇವಲ ಎದ್ದುಬರಲಿಲ್ಲ, ಹೊಸ ಮನುಷ್ಯರಾಗಿ ಪುನರುತ್ಥಾನ ಹೊಂದಿದರು. ಈಗ ಹಿರೋಶಿಮಾವಲ್ಲ, ಪುಕುಶಿಮಾ ಮತ್ತೆ ಪುನರುತ್ಥಾನಗೊಳ್ಳುತ್ತಿದೆ. ನಾಲ್ಕು ರಿಯಾಕ್ಟರುಗಳು ಸಿಡಿದ ಮೇಲೆ ಪರಿಸ್ಥಿತಿ ಹೇಗಿದೆ ಎಂದು ಕೇಳಿದವರಿಗೆ ಒಬ್ಬ ಪತ್ರಕರ್ತ ಹೇಳಿದ." ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ." 

ಅಮೂಲ್ಯವಾದ ನಿಧಿ 

ಪ್ರವಾಸಿಗರ ಗುಂಪೊಂದು ಬಸ್ಸನಲ್ಲಿ ಸುಂದರ ಮನೋಹರವಾದ ದೇಶವನ್ನು ಹಾದು ಹೋಗುತ್ತಿದ್ದಾರೆ: ಸುಂದರ ಕೆರೆ ಸರೋವರಗಳು, ಹಸಿರು ಮಲೆನಾಡು, ಅತ್ಯಾಕರ್ಷಕ ಪರ್ವತ ಶ್ರೇಣಿಗಳು, ಮನಸೆಳೆಯುವ ಝರಿಗಳು.ಆದರೆ ಪ್ರವಾಸಿಗರಿಗೆ ಮಾತ್ರ ಬಸ್ಸಿನ ಕಿಟಕಿಯಾಚೆಗೆ ಏನಿದೆ ಎಂಬುವುದರ ಬಗ್ಗೆ ಬೇಕಿಲ್ಲ. ಪ್ರಯಾಣದ ಎಲ್ಲಾ ಸಮಯವನ್ನು ಬಸ್ಸುನಲ್ಲಿ ಗೌರಯುತ ಆಸನ ಯಾರಿಗೆ ಸಿಗುತ್ತದೆ? ಜನರ ಪ್ರಶಂಸೆ ಯಾರಿಗೆ ಸಿಗುತ್ತದೆ? ಹೀಗೆ ಇಂತಹ ಚಿಂತೆಗಳಲ್ಲಿ ಮಗ್ನರಾಗಿ ಪ್ರಯಾಣವನ್ನು ಮುಗಿಸುತ್ತಾರೆ..!!! 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...