- ಫಾ. ಸಿರಿಲ್ ರಾಜ್ ಎಸ್.ಜೆ.
ಪ್ರಸ್ತಾವನೆ
ಇಂದು ಕಣ್ಣಿಗೆ ಕಾಣಿಸದ
ಸೂಕ್ಷ್ಮ ವೈರಾಣು ಜಗತ್ತಿನ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ಮಾಹಾಮಾರೀ ಕೊರೊನಾ
ಇಡೀ ಜಗತ್ತನ್ನು ಬಂಧನಕ್ಕೆ ಒಳಪಡಿಸಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು
ಒಂದಲ್ಲ ಒಂದು ರೀತಿಯಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೆ ಕೊರೊನಾ ವೈರಾಣುವಿನ ಸೋಂಕು
ತಡೆಗಟ್ಟಲು ವಿಧಿಸಿರುವ ದಿಗ್ಭಂದನದಿಂದ ಅನೇಕ ವಲಸಿಗರು ವಸತಿಯಿಲ್ಲದೆ, ತಿನ್ನಲು ಆಹಾರವಿಲ್ಲದೆ ಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ
ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಿದಾಗ ನಾನು ಓದಿದ ಅದ್ಭುತವಾದ ಆತ್ಮಕಥನ ನನ್ನ
ಸ್ಮೃತಿಪಟಲದಲ್ಲಿ ಮೂಡುತ್ತದೆ. ಅದೇ ಉಚಲ್ಯಾ ಆತ್ಮಕಥನ,
ಇದು ವ್ಯಕ್ತಿ
ಮತ್ತು ಸಮುದಾಯದ ಆತ್ಮಕಥನ, ವ್ಯಷ್ಠಿ, ಸಮಷ್ಠಿಯ ದಾರುಳ ನೈಜಕತೆ.
ಉಚಲ್ಯಾ – ಮಹಾರಾಷ್ಟ್ರದಲ್ಲಿ
ಬದುಕುತ್ತಿರುವ ಒಂದು ಜನಾಂಗದ ಹೆಸರು. ಇವರನ್ನು ಸಂತಾಮುಚ್ಚರ ಎಂದೂ ಕರೆಯುತ್ತಾರೆ. ಇವರ ಜಾತಿ
ಭಾಷೆ ತೆಲುಗು. ತೆಲುಗಿನಲ್ಲಿ ಸಂತಾಮುಚ್ಚರ ಎಂದರೆ ಸಂತೆಕಳ್ಳ ಎಂದು ಅರ್ಥ. ಉಚಲ್ಯಾ ಎಂದರೆ
ಮರಾಠಿಯಲ್ಲಿ ಗಂಟುಚೋರ ಎಂಬರ್ಥ. ಇವರ ಕಸುಬೇ ಕಳ್ಳತನ. ಇವರ ಮೂಲ ಎಲ್ಲಿಯದು ಎಂಬುದು ಖಚಿತವಿಲ್ಲ.
ಒಂದು ರೀತಿಯಲ್ಲಿ ಇವರದು ಅಲೆಮಾರಿ ಜನಾಂಗ. ಇಡೀ ಭಾರತದಲ್ಲಿ ಇವರನ್ನು ಜಾಧವ ಹಾಗೂ ಗಾಯಕವಾಡ ಎಂಬ
ಹೆಸರಿನಿಂದ ಗುರುತಿಸುತ್ತಾರೆ. ಇಂಥ ಒಂದು ಜನಾಂಗದಲ್ಲಿ ಹುಟ್ಟಿದ ಲಕ್ಷ್ಮಣ ಗಾಯಕವಾಡರು ಬರೆದ
ಆತ್ಮಕಥನ ಉಚಲ್ಯಾ. 1988ರಲ್ಲಿ ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯನ್ನು ಚಂದ್ರಕಾಂತ ಪೆÇೀಕಳೆಯವರು
ಕನ್ನಡಕ್ಕೆ ಅದ್ಭುತವಾಗಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಸಾಹಿತ್ಯಿಕವಾಗಿ ಮೌಲ್ಯಮಾಪನ
ಮಾಡುವುದಕ್ಕಿಂತ, ಸಮಾಜಶಾಸ್ತ್ರೀಯ ಮೌಲ್ಯಮಾಪನ
ಮಾಡಿದಾಗ ನನಗೆ ಉಚಲ್ಯಾ ಜನರ ಜೀವನದ ವಾಸ್ತವ ನನ್ನಲ್ಲಿ ಅನೇಕ ಭಾವನೆಗಳನ್ನು ಕೆರಳಿಸಿತು.
ಯಾವುದನ್ನು ನಾವು ಸಮಾಜ, ಸಮುದಾಯ ಅಂತ ಕರೆಯುತ್ತೇವೆ?
ಸಮುಚ್ಚಯ, ಒಟ್ಟಾಗಿ ಜೀವಿಸುವ ಸ್ಥಿತಿ. ಮಾನವೀಯತೆಯನ್ನು ಅರಿಯದ, ಉತ್ತೇಜಿಸದ, ಪರರನ್ನು ಹಿಂಸಿಸುವುದರಲ್ಲಿ, ಮೂಲಭೂತ ಸೌಕರ್ಯಗಳಿಂದ,
ಸೌಲಭ್ಯಗಳಿಂದ, ಸಂಪನ್ಮೂಲಗಳಿಂದ ವಂಚಿಸುವ, ಯೋಗ್ಯವಾಗಿ ಬದುಕನ್ನು ನಡೆಸಲು ಬೇಕಾದ ದಿನನಿತ್ಯದ
ಆಹಾರ, ವಸತಿ ಮತ್ತು ವಸ್ತ್ರವನ್ನು
ಕಸಿದುಕೊಳ್ಳುವ ವ್ಯವಸ್ಥೆಯಲ್ಲಿ ಜೀವಿಸುವವರ ಗುಂಪನ್ನು ಮಾನವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ.
ಈ ಆತ್ಮಕಥನದಲ್ಲಿ ಬರುವ ಪ್ರಧಾನ ಸಮಸ್ಯೆಗಳು/ ಕಾಳಜಿ : ತಿರಸ್ಕಾರ, ವಲಸೆ, ಶೋಷಣೆ (ದೈಹಿಕ ಮತ್ತು
ಮಾನಸಿಕ), ಅನಕ್ಷರತೆ, ಕೀಳರಿಮೆ, ನಿರುದ್ಯೋಗ, ಹಸಿವು, ಬಡತನ, ಅನೈತಿಕ ಸಂಬಂಧಗಳು, ಕುಡಿತನ. ಇಂತಹ ನೈಜ ಆತ್ಮಕಥನವನ್ನು ಓದಿದಾಗ ನಾವು ಕಳ್ಳತನವನ್ನು
ಸಮರ್ಥಿಸಬಹುದೆ? ನಿಜವಾದ ಅಪರಾಧಿಗಳು ಯಾರು?
ಲಕ್ಷ್ಮಣ ಗಾಯಕವಾಡ ಅವರ
ಜೀವನದ ಮೂರು ಹಂತಗಳು
1. ಗುರುತಿಲ್ಲದ ಇರವಿನ ಹಂತ: ಬಾಲ್ಯಾವಸ್ಥೆ
ಗುರುತು ನಮಗೆ ಯಾವುದರಿಂದ
ಬರುತ್ತದೆ? ಧರ್ಮ, ಜಾತಿ, ಸಮುದಾಯ, ವಿದ್ಯಾಭ್ಯಾಸದ ಅರ್ಹತೆ,
ವೃತ್ತಿ, ಹೆಸರು, ಅಸ್ತಿತ್ವ? ಜೀವಿಸಲಿಕ್ಕೆ ಗುರುತು ಬೇಕು ಎಂಬುದರ ಪರಿಜ್ಞಾನವನ್ನೆ ಕಳೆದುಕೊಳ್ಳುವ
ಹಾಗೆ ವರ್ತಿಸುವ ನೈತಿಕ, ವೈಚಾರಿಕ, ವಿದ್ಯಾವಂತ, ನಾಗರಿಕ ಸಮಾಜವನ್ನು ಕಂಡಾಗ
ಇದು ಎಂಥ ವಿಪರ್ಯಾಸ ಎಂಬ ಭಾವನೆ ಒದುಗರಲ್ಲಿ ಮೂಡುವುದು ಸಹಜ. ನಾವು ಸಮಾಜದಲ್ಲಿ ಎರಡು ರೀತಿಯ
ಗುರುತನ್ನು ಕಾಣಬಹುದು;
ಶೋಷಣೆಗೆ ಒಳಪಡಿಸುವ ಗುರುತು iಜeಟಿಣiಣಥಿ ಣhಚಿಣ oಠಿಠಿಡಿesses oಡಿ viಛಿಣimizes
ಕಳ್ಳರು, ಗುನ್ಹೆಗಾರರು, ಕ್ರಿಮಿನಲ್ ಟ್ರೈಬ್ಸ್, ದರೋಡೆಕೋರರು, ದಲಿತರು, ಹಿಂದುಳಿದವರು, ಅನಾಗರೀಕರು, ಹೊಲೆಯರು, ಪಂಚಮರು, ಪಾಥರೂಟ ಜನರು ಎಂಬ ನಾಮಫಲಕಗಳಿಂದ ಗುರುತಿಸಲ್ಪಟ್ಟಿರುವ ಉಚಲ್ಯಾ ಜನರು
ಸಮಾಜದ ಎಲ್ಲಾ ಸ್ತರಗಳಿಂದ, ಕ್ಷೇತ್ರಗಳಿಂದ, ಆವರಣದಿಂದ ತಿರಸ್ಕರಿಸಲ್ಪಟ್ಟವರು. ಜೀವಿಸಲು ಸಾಧ್ಯವಾಗುವ ಎಲ್ಲಾ
ಮಾರ್ಗಗಳಿಂದ ವಂಚಿತರಾದ ಸಮುದಾಯ. ಇವರಿಗೆ ಕಳ್ಳತನ ಅವಿವಾರ್ಯದ ವೃತ್ತಿಯಾಯಿತು. ಪ್ರಾಣಿಜೀವನ
ಜೀವಿಸಲು ಒತ್ತಾಯ ಪಡಿಸಲಾಯಿತು. ಈ ಅಂಶವನ್ನು ಲಕ್ಷ್ಮಣ ಗಾಯಕವಾಡರವರು ತಮ್ಮ ಆತ್ಮಕಥನದಲ್ಲಿ
ವರ್ಣಿಸುವ ಅವರ ಜೀವನದ ಕೆಲವು ನೈಜ ಸಂಗತಿಗಳಿಂದ ತಿಳಿದುಕೊಳ್ಳಬಹುದು.
ನಮ್ಮ ಮನಸ್ಸು ಸತ್ತಿದ್ದರಿಂದ
ಏನೂ ಅನ್ನಿಸುತ್ತಿರಲಿಲ್ಲ
ಖಾಯಿಲೆ – ಮಲರೋಗ, ಎಲ್ಲರಿಗೂ ಒಂದೇ ಹೊದಿಕೆ ನಾಯಿಯು ಸಹ ಇದರ ಫಲಾನುಭವಿ. ಅದು ಉಚ್ಚೆ
ಹೊಯ್ದರೂ ಏನೂ ಅನ್ನಿಸುತ್ತಿರಲಿಲ್ಲ. ಹೆಂಗಸರ ಹೇಲುಗೇರಿಯ ದೃಶ್ಯ. ಹೇಲನ್ನು ತಿಂದ ಹಂದಿಯನ್ನು
ತಿನ್ನುತ್ತಿದ್ದ ಇವರಿಗೆ ಅದರ ಬಗ್ಗೆ ಹೇಸಿಗೆ ಅನ್ನಿಸುತ್ತಿರಲಿಲ್ಲ. ಏಕೆಂದರೆ ಇವರ ಮನಸ್ಸು
ಸತ್ತಿತ್ತು. ಹೇಗೆ ತಿರಸ್ಕಾರ, ವಂಚನೆ, ಮೋಸ, ಅನ್ಯಾಯ ಮನುಷ್ಯನನ್ನು ಯಾವ
ಮನೋಸ್ಥಿತಿಗೂ ಕರೆದುಕೊಂಡು ಹೋಗಬಹುದು ಎಂಬುದಕ್ಕೆ ಇವರ ಜೀವನ ಸಾಕ್ಷಿಯಾಗಿದೆ.
ನಮ್ಮ ಮನೆ ಮೊದಲೇ ಚಿಕ್ಕದು.
ಅದರಲ್ಲಿ ನೊಣಗಳಂತೆ ವಾಸಿಸುವ ಮನೆಮಂದಿ. ಆಡಿನ ಪಕ್ಕದಲ್ಲೇ ನಮ್ಮ ಹಾಸಿಗೆ. ಚಳಿಗಾಲದಲ್ಲಿ ಗಡಗಡ
ನಡುಗುತ್ತ ಒಂದೇ ಹೊದಿಕೆಯೊಳಗೆ ಸೇರುತ್ತಿದ್ದೆವು. ನಾಯಿ ನಮ್ಮ ಹಾಸಿಗೆಯೊಳಗೆ ತೂರುತ್ತಿತ್ತು.
ರಾತ್ರಿ ಅದು ಉಚ್ಚೆ ಹೂಯ್ದರೂ ಬೆಚ್ಚಗೆನಿಸುತ್ತಿತ್ತು. ಮರುದಿನ ಮೂತ್ರದ ವಾಸನೆ ಬಂದರೂ ಅದನ್ನೇ
ಹೊದ್ದುಕೊಳ್ಳುತ್ತಿದ್ದೆವು.
2. ಗುರುತಿನ ಅರಿವು ಮೂಡುವ ಹಂತ (ಯೌವ್ವನಾವಸ್ಥೆ)
ಲಕ್ಷ್ಮಣ ಗಾಯಕವಾಡರವರಿಗೆ
ವರ್ಣವ್ಯವಸ್ಥೆಯ ಅರಿವಾಗುತ್ತದೆ. ಉಚಲ್ಯಾ ಜನರ ದಾರಿದ್ರ್ಯ, ಸಂಕಟ, ಉಸಿರುಗಟ್ಟಿದಂತಾಗುವ ಸ್ಥಿತಿ, ವ್ಯಥೆ, ಅಸಹಾಯಕತೆ, ಹತಾಶೆ, ನಿರಾಶೆಯ ಅರಿವಾಗುತ್ತದೆ. ಯಾಕೆ ಕಳ್ಳತನ ಮಾಡಿ ಜೀವಿಸಬೇಕು? ಪರ್ಯಾಯ ಮಾರ್ಗ ಇದೆಯಾ ಎಂದು ತನ್ನನ್ನೆ ಪ್ರಶ್ನಿಸಿಕೊಳ್ಳುತ್ತಾನೆ
ಲಕ್ಷ್ಮಣ.
ಬ್ಲೇಡಿಗೆ ಬದಲಾಗಿ ಸ್ಲೇಟ್ –
ಜನ ನನ್ನನ್ನು ಮುಟ್ಟಲಾರಂಭಿಸಿದರು.
ಕಳ್ಳತನದ ಪರಿಣಾಮವನ್ನು ಅರಿತ
ಲಕ್ಷ್ಮಣನ ತಂದೆ ಮಗನನ್ನು ಶಾಲೆಗೆ ಕಳುಹಿಸುತ್ತಾನೆ. ಇಲ್ಲಿ ಗುರುತಿಲ್ಲದ ಜೀವನಕ್ಕೆ
ಬೇಸತ್ತಿದ್ದ ತಂದೆ ಮಗನು ಸಹ ಹಾಗಾಗಬಾರದೆಂಬ ಕಾಳಜಿ ಸಮಾಜದ ಅನೇಕ ಅಸಮಾನತೆಯ ವ್ಯವಸ್ಥೆಗೆ
ಸಿಲುಕಿದ ಜನರ ಸಂಕಷ್ಟವನ್ನು ಅರಿಯಲು ಇಟ್ಟಿದ ಪ್ರಥಮ ಹೆಜ್ಜೆ. ತೋಳದ ಗುಂಪಲಿ ಕುರಿ ನುಸುಳಿದಂತೆ
ಲಕ್ಷ್ಮಣ ಶಾಲೆಯನ್ನು ಪ್ರಾರಂಭಿಸುತ್ತಾನೆ. ತಂದೆಯ ಇಚ್ಛೆ, ನಿರ್ಧಾರ ಬೇಕು
ಮಕ್ಕಳ ಭವಿಷ್ಯಕ್ಕೆ. ಶಿಕ್ಷಣದಿಂದ ಅರಿವು. ಕಾಲಕಾಲಕ್ಕೆ ತನ್ನನ್ನೆ ಪ್ರಶ್ನಿಸಿಕೊಳ್ಳುತ್ತಿದ್ದ.
ಭಾರತ ದೇಶ ನನ್ನದು. ನಾವೆಲ್ಲ ಬಾಂಧವರು, ಆದರೆ ನಾವೇಕೆ ಹೀಗೆ? ಕೊಂಡವಾಡೆ ದನ ಮತ್ತು ಲಕ್ಷ್ಮಣನ ಅಣ್ಣ ಒಂದೇ. ದೇವ್ರು ಈ ಶಿಕ್ಷೆ
ನನಗೇಕೆ ಕೊಟ್ರು? ನನಗಿಂತಲೂ ಬಿಕ್ಷುಕ
ಮೇಲಲ್ಲವೆ? ನಾನು ಮಾಡಿದ ಪಾಪವಾದರೂ ಏನು? ಹಠವಾದಿಯಾದ ಏನಾದರೂ ವಿದಾಯಕ ಕೆಲಸ ಮಾಡಿ ತೋರಿಸಬೇಕು. ಶಿಕ್ಷಣ
ವೈಚಾರಿಕ ಮನಸ್ಸನು ಬೆಳೆಸುತ್ತದೆ. ಪ್ರಶ್ನಿಸುವ ಎದೆಗಾರಿಕೆಯನ್ನು ಸೃಷ್ಟಿಸುತ್ತದೆ.
3. ಗುರುತಿಗಾಗಿ ಹೋರಾಡುವ,
ಪ್ರತಿಭಟಿಸುವ ಹಂತ
(ಸಂಸಾರಸ್ಥನಾಗಿ) ಪರಿವರ್ತನೆಯ ಹೋರಾಟ
ಶೋಷಣೆಯಿಂದ ವಿಮೋಚನೆ, ಅನ್ಯಾಯದಿಂದ ನ್ಯಾಯದೆಡೆಗೆ,
ನೋವಿನ ಅಂಧÀಕಾರದಿಂದ ನೆಮ್ಮದಿಯ ಬೆಳಕಿನೆಡೆಗೆ, ತಿರಸ್ಕಾರದಿಂದ ಸ್ವೀಕಾರ,
ಅಂಗೀಕಾರ. ಇಜuಛಿಚಿಣe, ಂgiಣಚಿಣe ಚಿಟಿಜ ಔಡಿgಚಿಟಿise: ಶಿಕ್ಷಣ, ಸಂಘರ್ಷ, ಸಂಘಟನೆ ಎಂಬ ಅಂಬೇಡ್ಕರ್ ರವರ
ಧೋರಣೆಯಂತೆ ಇಲ್ಲಿ ಲಕ್ಷ್ಮಣನ ಜೀವನದಲ್ಲಿ ಪ್ರತಿಭಟನೆ ಪ್ರಮುಖವಾಯಿತು. ನೂಲಿನ ಗಿರಣಿಯಲ್ಲಿದ್ದ
ಕಾರ್ಮಿಕರ ಅನ್ಯಾಯವಾಗಿ ಹೊಡೆಯುತ್ತಿದ್ದರು, ಯುನಿಯನ್ ಪ್ರಾರಂಭಿಸಿ
ಅಲ್ಲಿನ ಸ್ಥಿತಿಯನ್ನು ಸುಧಾರಿಸಿದ ಲಕ್ಷ್ಮಣ. ದೀಪಾವಳಿ ಹಬ್ಬದಂದು ಸಹ ಪ್ರತಿಭಟನೆ. ನ್ಯಾಯ
ಸಿಕ್ಕಿದಾಗ ಆದ ನಿಜವಾದ ದೀಪಾವಳಿ ಹಬ್ಬವನ್ನು ಆಚರಿಸಿದ. ಬಿತ್ತನೆ ಬೀಜದ ಅಂಗಡಿಯಲ್ಲಿ ಅನ್ಯಾಯದ
ವಿರುದ್ಧ ಪ್ರತಿಭಟನೆ. ಕಾರ್ಮಿಕನಾಗಿ, ಚಹಾ ಅಂಗಡಿ, ಕಾಯಿಪಲ್ಯೆ ಅಂಗಡಿ, ಹಾಲಿನ ಡೈರಿ ಪ್ರಾರಂಭಿಸಿ
ಕಳ್ಳತನದ ಮೂಲವೃತ್ತಿಯಿಂದ ಹೊರಬರಲು ಪ್ರಯತ್ನಿಸಿದರೂ ತನ್ನ ಬದುಕಿನ ಪ್ರಶ್ನೆ ಕಳೆದ ಹತ್ತು
ವರ್ಷಗಳಿಂದ ಎಷ್ಟೇ ಪ್ರಯತ್ನಿಸಿದರೂ ಬಿಡಿಸುವುದಾಗಲಿಲ್ಲ ಎನ್ನುತ್ತಾನೆ ಲಕ್ಷ್ಮಣ. ಬ್ಯಾಂಕ್ ಸಾಲ
ತೆಗೆದು ಹೆಂಡತಿಗೆ ಅಂಗಡಿ ಹಾಕಿಕೊಟ್ಟಿದ್ದೇನೆ. ಅವಳು ನನ್ನ ಸಂಘಟನೆಯ ಕಾರ್ಯದಲ್ಲಿ ತುಂಬ
ಸಹಕರಿಸಿದ್ದಾಳೆ. ಈಗಲೂ ಅಷ್ಟೇ ಶ್ರದ್ಧೆಯಿಂದ ಸಹಕರಿಸುತ್ತಾಳೆ. ನನ್ನ ಮಕ್ಕಳು ಸದ್ಯ
ಲಾತೂರಿನಲ್ಲಿ ಕಲಿಯುತ್ತಿದ್ದಾರೆ. ನನ್ನ ಅಣ್ಣಂದಿರು ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ
ಅಲೆಯುತ್ತಿದ್ದಾರೆ. ನಾನು ಅಲೆಮಾರಿಗಳ ಸಾಮಾಜಿಕ ಪರಿವರ್ತನೆಗಾಗಿ, ನ್ಯಾಯ ಹಕ್ಕಿಗಾಗಿ ಚಳುವಳಿ ನಡೆಸುತ್ತ ಸಂಚಾರ ಮಾಡುತ್ತಿರುತ್ತೇನೆ.
ಇಷ್ಟಾದರೂ ನನ್ನ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ರಾಜಕೀಯ ಪುಢಾರಿಗಳು ಸವಿ ಸವಿಯಾಗಿ
ಮಾತನಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇನ್ನೊಂದು ಅರ್ಥದಲ್ಲಿ ನಮ್ಮ ಜನರ ಶೋಷಣೆ
ಮಾಡುತ್ತಿದ್ದಾರೆ.
ಈ ಆತ್ಮಕಥನದಲ್ಲಿ ಮೂಡಿಬರುವ
ವೈರುಧ್ಯಗಳ ಮುಖಾಮುಖಿ
ಹಸಿವು, ಆಶ್ರಯಕ್ಕಾಗಿ ನ್ಯಾಯಸಮ್ಮತ ಮಾರ್ಗಗಳು ಮುಚ್ಚಲ್ಪಟ್ಟಾಗ, ಕಳ್ಳತನ ಮಾಡಿಯೇ ಬದುಕಬೇಕಾದ ಸಂದರ್ಭ.
ಕೋಟ್ಯಾಂತರ ರೂಪಾಯಿಗಳನ್ನು
ನ್ಯಾಯಯುತವಾಗಿ ಕಳ್ಳತನ ಮಾಡುವ ಸುಶಿಕ್ಷಿತ, ಪ್ರತಿಷ್ಠಿತ ಸಮಾಜ.
ಲಂಚ ಭ್ರಷ್ಟಾಚಾರಗಳ ಮೂಲಕ
ಲಕ್ಷಗಟ್ಟಲೆ ಹಣ ಗಳಿಸುವ ಜನ ಗುನ್ಹೇಗಾರರೆಂದು ಪರಿಗಣಿಸಲ್ಪಡುವುದಿಲ್ಲ.
ಹೊಟ್ಟೆ ಪಾಡಿಗಾಗಿ ಹತ್ತು
ಇಪತ್ತು ರೂಪಾಯಿ ಕಳ್ಳತನ ಮಾಡುವ ಜನ ಕ್ರಿಮಿನಲ್ ಟ್ರೈಬ್ಸ್ ಎಂಬ ಪಟ್ಟಕ್ಕೆ ಒಳಗಾಗುತ್ತಾರೆ.
ಕಳ್ಳತನ ಮಾಡುವುದು ತಪ್ಪು
ಎಂಬ ಅರಿವಿದ್ದರೂ ಪರ್ಯಾಯ ವೃತ್ತಿಯನ್ನು, ಅವಕಾಶವನ್ನು ನೀಡಲು ಯಾರೂ
ಮುಂದಾಗುವುದಿಲ್ಲ. ಇನ್ನೊಂದೆಡೆ ಒತ್ತಾಯಪೂರ್ವಕವಾಗಿ,
ಅವಕಾಶಗಳಿಂದ
ವಂಚಿತರಾಗಿ ಕಳ್ಳತನವೇ ನಮ್ಮ ಸಮುದಾಯದ ವೃತ್ತಿ, ಅದೇ ನಮ್ಮ ಬದುಕು ಎಂಬ
ನಂಬಿಕೆಯನ್ನು ಅಂತರ್ಗತ ಮಾಡಿಕೊಂಡು ಹಿಂಸೆಗೊಳಗಾದರೂ,
ಬಂಧನಕ್ಕೊಳಗಾದರೂ, ಅವಮಾನಕ್ಕೊಳಗಾದರೂ, ಪೆÇೀಲಿಸರ ದೌರ್ಜನ್ಯನಿಂದ ಸತ್ತರೂ ನಾವು ಜನ್ಮಜಾತ ಗುನ್ಹೇಗಾರರು ಎಂಬ
ಆಳವಾದ ನಂಬಿಕೆ.
ಆತ್ಮಕಥನದ ಆಶಯಗಳು...
ಮನುಷ್ಯರಂತೆ ಬದುಕುಲು ಅವಕಾಶ
ಕೊಡಿ ಎನ್ನುವ ಕೂಗು.
ಜನರಿಗೆ ತಿಳುವಳಿಕೆ
ಅವಶ್ಯಕತೆ: ಏಕೆಂದರೆ ಸವರ್ಣೀಯರಿಗೆ, ಮಧ್ಯಮ ವರ್ಗದವರಿಗೆ, ಬುದ್ಧಿಜೀವಿಗಳಿಗೆ, ಪಟ್ಟಭದ್ರರಿಗೆ, ಮೂಲಭೂತವಾದಿಗಳಿಗೆ, ಸಂಪ್ರದಾಯವಾದಿಗಳಿಗೆ, ಪ್ರಗತಿಯನ್ನು ವಿರೋಧಿಸುವವರಿಗೆ ಈ ಸಮಾಜದ ತಳಸಮುದಾಯಗಳ ನೋವಿನ
ಅರಿವಿಲ್ಲದಿರುವುದು... ಅರಿಯಲು ಪ್ರಯತ್ನಸದಿರುವುದು ಇಂದಿನ ದೊಡ್ಡ ದುರಂತ ... ಉದ್ದೇಶಪೂರ್ವಕ
ನಿರ್ಲಕ್ಷ್ಯತನದ ವಾಸ್ತವತೆ ನಿಜಕ್ಕೂ ಶೋಚನೀಯ ಮತ್ತು ನಾಚಿಕೆ ಪಡುವಂತಹದ್ದು.
ಉಪಸಂಹಾರ:
ಹೀಗೆ ಸಮಾಜವನ್ನು
ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಕೆಳಗಿನ ಅಂಶಗಳನ್ನು ಕಾಣಬಹುದು. ಅನ್ಯಾಯಕ್ಕೆ ಒಳಗಾದ ಸಮಾಜ.
ಶೋಷಣೆಗೆ ಒಳಗಾದ ಸಮಾಜದ ಸುಧಾರಣೆಗೆ ಯಾವುದೇ ಯೋಜನೆಯಿಲ್ಲದಿರುವುದು. ಇದ್ದರೂ ಭ್ರ್ರಷ್ಟಾಚಾರದಿಂದ ಸರಿಯಾಗಿ ಅದು ಜನರಿಗೆ ತಲುಪುತ್ತಿಲ್ಲದಿರುವುದು. ಬದುಕುವ ಹಕ್ಕನ್ನು
ಕಸಿದುಕೊಂಡ ಉಚಲ್ಯಾ ಜನರ ಜೀವನ ಒಂದು ಧಾರುಳ ಕಥೆಯಾಗಿರುವುದು ನಿಜಕ್ಕೂ ಶೋಚನೀಯ. ಈ
ಆತ್ಮಕಥನವನ್ನು ಒದುವಾಗ ನನ್ನಲ್ಲಿ ಮೂಡಿಬಂದ ಆಲೋಚನೆ ಮನುಷ್ಯರಾಗಿ ಮಾನವೀಯತೆಯನ್ನು, ಸಂವೇದನಾಶೀಲ ಮನಸ್ಸನ್ನು ಕಳೆದುಕೊಂಡಾಗ ನಾವು ಪರರನ್ನು
ಪ್ರಾಣಿಗಳಿಗಿಂತಲೂ ಕ್ರೂರವಾಗಿ ಕಾಣುತ್ತೇವೆ ಎಂಬುದು ಈ ಆತ್ಮಕಥನದಿಂದ ಸ್ಪಷ್ಟವಾಗಿದೆ. ಇಂದು
ಕೊರೋನಾ ವೈರಾಣುವಿನ ಸೋಂಕು ಎಲ್ಲಾ ಜಾತಿ, ಧರ್ಮ, ಪಂಗಡ, ಲಿಂಗ, ರಾಷ್ಟ್ರ, ಭಾಷೆ, ವೃತ್ತಿ, ವಿದ್ಯಾರ್ಹತೆ, ಸ್ಥಾನಮಾನ ಎಲ್ಲಾ ನಿರ್ಬಂಧÀಗಳನ್ನು ಮೀರಿದೆ. ಇಲ್ಲಿ
ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ ಕವನ ನನಗೆ ನೆನಪಾಗುತ್ತದೆ.
ಇಲ್ಲಿ ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ !
ಇಲ್ಲಿ ಯಾವುದಕ್ಕೂ ಮೊದಲಿಲ್ಲ
ಯಾವುದೂ ತುದಿಯಿಲ್ಲ
ಯಾವುದೂ ಎಲ್ಲಿಯೂ
ನಿಲ್ಲುವುದು ಇಲ್ಲ
ಕೊನೆಮುಟ್ಟುವುದೂ ಇಲ್ಲ !
ಇಲ್ಲಿ ಅವಸರವೂ ಸಾವಧಾನದ
ಬೆನ್ನೇರಿದೆ
ಇಲ್ಲಿ ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವು ತೀರ್ಥ!
**********