- ಡೇವಿಡ್ ಕುಮಾರ್. ಎ
ಏಕಾಂತ ಮೇಲೆರಗಿ
ಮಾತುಗಳು ಮರೆಯಾಗಿ,
ನಮ್ಮೊಳಗೆ ನಾವಿಳಿಯೇ
ಅಚ್ಚಳಿಯದ ಮೌನ
ಗುಡಿದೇವರ ತೊರೆದು
ಎದೆದೇವರ ಕೆತ್ತಿ,
ನೆತ್ತಿ ಮೇಲಿನ ತಾರೆ
ನೆತ್ತರೊಳಗೆ ಮಿಂಚಿದಂತೆ !
ತಂಗಾಳಿಯ ಅಲೆಯು
ಮುತ್ತ ಹೊತ್ತು ತೇಲಿ
ಮುಖಗವಸುಗಳ ಸೀಳಿ
ಕೆನ್ನೆ ಗಲ್ಲಗಳ ಅಪ್ಪಿ !
ಗರಿಕೆ ಚಿಗುರು ದಾರಿ ಹಸಿರು
ನವ ಲೋಕದ ಕುರುಹು,
ದುಂಬಿ ನಾದ, ಚಿಟ್ಟೆ ಚಿತ್ತಾರ
ಕಲ್ಪನೆಗಳ ತವರು !
**********
No comments:
Post a Comment