Thursday, 13 February 2020

ಮೌನದ ದನಿ


- ಜೀವಸೆಲೆ

ಮೌನದಲ್ಲಿ ಹಾಡಾದ
ನನ್ನ ಮಾತುಗಳು
ಖಾಲಿ ಶಬ್ದಗಳಲ್ಲ...
ನಿನ್ನ ಅರಿವ ತಿಳಿಹೇಳುವ
ನಿನ್ನದೇ ಆತ್ಮಸೃಷ್ಟಿ
-------
ನನ್ನ ಬದುಕ ಪುಸ್ತಕದಲ್ಲಿ
ನಿನ್ನದಚ್ಚಿಲ್ಲದ ಒಂದಾಳೆಯು
ಕಾಣದಾಗ
ಅರಿವಾಗಿದ್ದು:
ಈ ಬದುಕು ನೀ ಬರೆಯುವ ದಿನಚರಿ! ಎಂದು
-----
ದಿನಪತ್ರಿಕೆಯ
ಓದುತ್ತಾ ಓದುತ್ತಾ
ನಿಟ್ಟುಸಿರಿನಿಂದ ಹೇಳಿದ್ದು
ಮನುಷ್ಯನಿಗೆ ನೀ ಮನುಷ್ಯನೆಂದು
ತಿಳಿ ಹೇಳುವ ಅಗಾಧ ಸಮಾಜಮುಖೀ
ಪ್ರವಾದಿ ನೀನು ಬರಬೇಕೆಂದು

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...