Saturday, 21 December 2019

ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ


- ಉಮರ್ ದೇವರಮನಿ

ಯಾಕೆ ಆಸೆ ನನ್ನ ನಗುವನು ಕಸಿಯುತಿದೆ
ಕೆನೆ ಭರಿತ ಹಾಲಿಗೆ ಹುಳಿಯನು ಹಿಂಡುತಿದೆ

ಹರಿಯುವ ನದಿಗೆ ಅಣೆಕಟ್ಟು ಅಡ್ಡ ಬಂದು
ಸಾಗರ ಸೇರುವ ಮೀನಿನ ರೆಕ್ಕೆಗಳನು ಮುರಿಯುತಿದೆ

ಇದೆಂಥಹ ಬಳ್ಳಿ ಹೂವನ್ನೇ ಸುತ್ತುತಿದೆ 
ಅರಳುವ ಹೂವಿನ ಮಕರಂದವನು ಮರೆಸುತಿದೆ

ಬಯಲೊಳಗೆ ಬಯಲಾಗಬೇಕೆಂದು ಕೊಂಡಿದ್ದೆ ಸಾಕಿ
ಯಾಕೆ ಈ ಆಲಯವು ಗೋಡೆಗಳನು ಬಯಸುತಿದೆ

ಬುದ್ಧ ಬಸವ ಯೇಸು ಪೈಗಂಬರರೇ ಕೇಳಿ
ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ

*******************


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...