ಡೇವಿಡ್ ಕುಮಾರ್. ಎ
ಕಣ್ಣೀರು ಸುರಿಸುವಿರೇನು ?
ಕುಲಗಳಲಿ ಶ್ರೇಷ್ಠರೆನಿಸಿ,
ಈರುಳ್ಳಿ ತಿನ್ನದವರು ನಾವು !
ಹೊಟ್ಟೆಗಿಟ್ಟಲ್ಲದ ಮಕ್ಕಳು
ರೊಟ್ಟಿಗೆ ಪಲ್ಯವಿಲ್ಲದೆ,
ಉಪ್ಪು ನೆಕ್ಕಿದರೇನು ?
ಮಕ್ಕಳಿಲ್ಲ ನಮಗೆ
ವೈರಾಗಿ 'ಯೋಗಿ' ಗಳು ನಾವು !
ಶಾಲೆಗಳ ಸೂರು ಬಿದ್ದು
ಪಾಯಿಖಾನೆ ಗಬ್ಬೆದ್ದು,
ಮಕ್ಕಳು ಸೊರಗಿದರೇನು ?
ಶಾಲೆಯ ಮೆಟ್ಟಿಲೇರದವರು ನಾವು !
ಮಸೀದಿಗಳುಧ್ವಂಸಗೊಂಡು
ಚರ್ಚುಗಳು ಭಗ್ನಗೊಂಡು
ಭಾವೈಕ್ಯತೆಗೆ ಬೆಂಕಿ ಬಿದ್ದರೇನು ?
ನ್ಯಾಯವನೇ ಸುಟ್ಟವರು ನಾವು !
ಅಬಲೆಯರ ಅಪಹರಿಸಿ
ಸುಖಿಸಿ, ಸಂಹರಿಸಿ,
ಹೆಣ್ತನವ ಹಿಸುಕಿದರೇನು ?
ರಾಮನಿಗಷ್ಟೇ ಗುಡಿ ಕಟ್ಟುವವರು ನಾವು !
----------------------------
No comments:
Post a Comment