Saturday, 21 December 2019

ಅನ್ಯ ಗ್ರಹದವರು...

ಡೇವಿಡ್ ಕುಮಾರ್. ಎ 


ಈರುಳ್ಳಿ ಬೆಲೆ ನೆನೆದು
ಕಣ್ಣೀರು ಸುರಿಸುವಿರೇನು ?
ಕುಲಗಳಲಿ ಶ್ರೇಷ್ಠರೆನಿಸಿ,
ಈರುಳ್ಳಿ ತಿನ್ನದವರು ನಾವು !

ಹೊಟ್ಟೆಗಿಟ್ಟಲ್ಲದ ಮಕ್ಕಳು
ರೊಟ್ಟಿಗೆ ಪಲ್ಯವಿಲ್ಲದೆ,
ಉಪ್ಪು ನೆಕ್ಕಿದರೇನು ?
ಮಕ್ಕಳಿಲ್ಲ ನಮಗೆ

ವೈರಾಗಿ 'ಯೋಗಿ' ಗಳು ನಾವು !
ಶಾಲೆಗಳ ಸೂರು ಬಿದ್ದು
ಪಾಯಿಖಾನೆ ಗಬ್ಬೆದ್ದು,
ಮಕ್ಕಳು ಸೊರಗಿದರೇನು ?
ಶಾಲೆಯ ಮೆಟ್ಟಿಲೇರದವರು ನಾವು !

ಮಸೀದಿಗಳುಧ್ವಂಸಗೊಂಡು
ಚರ್ಚುಗಳು ಭಗ್ನಗೊಂಡು
ಭಾವೈಕ್ಯತೆಗೆ ಬೆಂಕಿ ಬಿದ್ದರೇನು ?
ನ್ಯಾಯವನೇ ಸುಟ್ಟವರು ನಾವು !

ಅಬಲೆಯರ ಅಪಹರಿಸಿ
ಸುಖಿಸಿ, ಸಂಹರಿಸಿ,
ಹೆಣ್ತನವ ಹಿಸುಕಿದರೇನು ?
ರಾಮನಿಗಷ್ಟೇ ಗುಡಿ ಕಟ್ಟುವವರು ನಾವು ! 
----------------------------

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...