----
- ಉಮರ್ ದೇವರಮನಿ
ಹುಡುಕಿಕೊಂಡು ಬಂದೇ ಬರುವೆ ಒಂದು
ಅಸ್ತ್ರಗಳನ್ನು ಕೆಳಗಿಟ್ಟು ಬಿಡುವೆ ಒಂದು ದಿನ
ಹತ್ತಿರವಿದ್ದರೂ ಹೀಗೆ ದೂರ ನಿಲ್ಲುವೆಯಲ್ಲ
ಆ ಆಹಂ ಕರಗುವುದಿಲ್ಲವೆ ಒಂದು ದಿನ
ನಂಬಿದ ತನು ಮನ ಧನ ಅಧಿಕಾರವೆಲ್ಲಿ
ಹುಸಿಯು ನುಸಿಯಾಗಲಿಲ್ಲವೆ ಒಂದು ದಿನ
ಎಲ್ಲೆಲ್ಲೂ ಹುಡುಕಿ ಇಲ್ಲವಾದೆ ಪ್ರೀತಿಯನು
ನಿನ್ನಲಿ ನೀನು ಹುಡಕಲಿಲ್ಲವೆ ಒಂದು ದಿನ
ಈ ಒಳಗಿನ ಒಂಡನು ಕಲಕಬೇಡ ಉಮರ್
ನಾಲಗೆ ಅಮೃತ ಸವಿಯಲಿಲ್ಲವೆ ಒಂದು ದಿನ
————————————
ಮಳೆ ನಿಂತರೂ ಹನಿ ಮೂಡುವುದು ಏಕೆ
ನೀನು ಬಂದರೂ ಬಾರದ ಭಾವವು ಏಕೆ
ಮೋಡ ಸುರಿದು ನದಿಸಾಗರ ತುಂಬಿದರೂ
ಹನಿಗಳು ಕಾದು ಆವಿಯಾಗುವುದು ಏಕೆ
ಮಣ್ಣು ಹದಗೊಳಿಸಿ ಬಿತ್ತಿದ್ದೇನೋ ನಿಜ
ಬೀಜ ಮರವಾಗಿ ಹೀಗೆ ಒಣಗುವುದು ಏಕೆ
ಮುಗಿಯುತ್ತಿಲ್ಲ ಎಷ್ಟು ನಡೆದರೂ ದಾರಿ
ಗುರಿ ಮುಟ್ಟಿದರೂ ಉದ್ದೇಶ ಉಳಿಯುವುದು ಏಕೆ
ಉಮರ್ ಇದ್ದಾನೋ ಇಲ್ಲವೋ ನಾನರಿಯೇ
ಅವನ ನೆನಪುಗಳು ಹೀಗೆ ಕಾಡುವುದು ಏಕೆ
**********
- ಉಮರ್ ದೇವರಮನಿ
ಹುಡುಕಿಕೊಂಡು ಬಂದೇ ಬರುವೆ ಒಂದು
ಅಸ್ತ್ರಗಳನ್ನು ಕೆಳಗಿಟ್ಟು ಬಿಡುವೆ ಒಂದು ದಿನ
ಹತ್ತಿರವಿದ್ದರೂ ಹೀಗೆ ದೂರ ನಿಲ್ಲುವೆಯಲ್ಲ
ಆ ಆಹಂ ಕರಗುವುದಿಲ್ಲವೆ ಒಂದು ದಿನ
ನಂಬಿದ ತನು ಮನ ಧನ ಅಧಿಕಾರವೆಲ್ಲಿ
ಹುಸಿಯು ನುಸಿಯಾಗಲಿಲ್ಲವೆ ಒಂದು ದಿನ
ಎಲ್ಲೆಲ್ಲೂ ಹುಡುಕಿ ಇಲ್ಲವಾದೆ ಪ್ರೀತಿಯನು
ನಿನ್ನಲಿ ನೀನು ಹುಡಕಲಿಲ್ಲವೆ ಒಂದು ದಿನ
ಈ ಒಳಗಿನ ಒಂಡನು ಕಲಕಬೇಡ ಉಮರ್
ನಾಲಗೆ ಅಮೃತ ಸವಿಯಲಿಲ್ಲವೆ ಒಂದು ದಿನ
————————————
ಮಳೆ ನಿಂತರೂ ಹನಿ ಮೂಡುವುದು ಏಕೆ
ನೀನು ಬಂದರೂ ಬಾರದ ಭಾವವು ಏಕೆ
ಮೋಡ ಸುರಿದು ನದಿಸಾಗರ ತುಂಬಿದರೂ
ಹನಿಗಳು ಕಾದು ಆವಿಯಾಗುವುದು ಏಕೆ
ಮಣ್ಣು ಹದಗೊಳಿಸಿ ಬಿತ್ತಿದ್ದೇನೋ ನಿಜ
ಬೀಜ ಮರವಾಗಿ ಹೀಗೆ ಒಣಗುವುದು ಏಕೆ
ಮುಗಿಯುತ್ತಿಲ್ಲ ಎಷ್ಟು ನಡೆದರೂ ದಾರಿ
ಗುರಿ ಮುಟ್ಟಿದರೂ ಉದ್ದೇಶ ಉಳಿಯುವುದು ಏಕೆ
ಉಮರ್ ಇದ್ದಾನೋ ಇಲ್ಲವೋ ನಾನರಿಯೇ
ಅವನ ನೆನಪುಗಳು ಹೀಗೆ ಕಾಡುವುದು ಏಕೆ
**********
No comments:
Post a Comment