Saturday, 4 April 2020

ಕಥಾದನಿ

--------------
- ಇನ್ನಾ
ನಿಮಗೆ ಉಂಗುರವನ್ನು ನೀಡಲಿಲ್ಲ ಎಂದು ನೆನಪಿಡಿ
ಒಮ್ಮೆ ಒಬ್ಬ, ಮುಲ್ಲಾ ನಸ್ರುದಿನ್ ಹತ್ತಿರ ಬಂದು ಈ ರೀತಿಯಾಗಿ ವಿನಂತಿಸಿದ: "ನಿಮ್ಮ ಉಂಗುರವನ್ನು ನನಗೆ ಸ್ಮರಣಾರ್ಥವಾಗಿ ನೀಡಿ, ಆದ್ದರಿಂದ ನಾನು ಅದನ್ನು ನೋಡಿದಾಗಲೆಲ್ಲಾ ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ."
ಮುಲ್ಲಾ ಉತ್ತರಿಸಿದ: “ನಾನು ನಿಮಗೆ ಉಂಗುರವನ್ನು ಕೊಡಲು ಸಾಧ್ಯವಿಲ್ಲ. ಆದರೆ ನೀನು ನನ್ನನ್ನು ನೆನಪಿಟ್ಟುಕೊಳ್ಳಲು ಬಯಸಿದಾಗಲೆಲ್ಲಾ, ನಿನ್ನ ಬೆರಳನ್ನು ನೋಡಿ ನಾನು ನಿಮಗೆ ಉಂಗುರವನ್ನು ನೀಡಲಿಲ್ಲ ಎಂದು ನೆನಪಿಡಿ!”
------------------------
ಉಂಗುರವನ್ನು ಎಲ್ಲಿ ಹುಡುಕಲಿ ?
ಮುಲ್ಲಾ ತನ್ನ ಮನೆಯ ಒಂದು ಕೋಣೆಯಲ್ಲಿ ಉಂಗುರವನ್ನು ಕಳೆದುಕೊಂಡಿದ್ದ. ಅವನು ಸ್ವಲ್ಪ ಸಮಯ ಉಂಗುರಕ್ಕಾಗಿ ಆ ಕೋಣೆಯಲ್ಲಿ ಹುಡುಕಾಡಿದ. ಆದರೆ ಅವನಿಗೆ ಕೋಣೆಯಲ್ಲಿ ಉಂಗುರ ಸಿಗದ ಕಾರಣ, ಅವನು ಮನೆಯ ಮುಂದಿದ್ದ ಅಂಗಳಕ್ಕೆ ಹೊರಟು ಅಲ್ಲಿ ಉಂಗುರಕ್ಕಾಗಿ ಹುಡುಕಲು ಪ್ರಾರಂಭಿಸಿದನು. ಅವನು ಏನು ಮಾಡುತ್ತಿದ್ದಾನೆಂದು ನೋಡಿದ ಅವನ ಹೆಂಡತಿ ಕೇಳಿದಳು: “ಮುಲ್ಲಾ, ನೀವು ಕೋಣೆಯಲ್ಲಿ ನಿಮ್ಮ ಉಂಗುರವನ್ನು ಕಳೆದುಕೊಂಡಿದ್ದೀರಿ, ಆದರೆ ನೀವು ಅದನ್ನು ಅಂಗಳದಲ್ಲಿ ಏಕೆ ಹುಡುಕುತ್ತಿದ್ದೀರಿ??” ಮುಲ್ಲಾ ತನ್ನ ಗಡ್ಡವನ್ನು ಸವರಿಕೊಂಡು ಹೇಳಿದ: “ಕೋಣೆ ತುಂಬಾ ಕತ್ತಲೆಯಾಗಿರುವುದ್ದರಿಂದ ನನಗೆ ಕೋಣೆಯಲ್ಲಿ ಏನು ಕಾಣುತ್ತಿಲ್ಲ. ಅಂಗಳಲ್ಲಿ ಹೆಚ್ಚು ಬೆಳಕು ಇರುವುದರಿಂದ ನಾನು ಉಂಗುರವನ್ನು ಹುಡುಕಲು ಅಂಗಳಕ್ಕೆ ಬಂದಿದ್ದೇನೆ.?”
------------------------
ಕಳೆಗಳನ್ನು ಪ್ರೀತಿಸಲು ಕಲಿಯಬೇಕು
ಒಮ್ಮೆ ಮುಲ್ಲಾ ತನ್ನ ಕೈತೋಟದಲ್ಲಿ ಎಲ್ಲಾ ರೀತಿಯ ಬೀಜಗಳನ್ನು ಹಾಕಿದನು. ಜೀಜಗಳು ಮೊಳಕೆಯೊಡೆದು ಸಸಿಗಳಾಗಲು ಉತ್ಸುಕತೆಯಿಂದ ಕಾಯುತ್ತಿದ್ದ. ಕೆಲವೊಂದು ಬೀಜಗಳು ಮೊಳಕೆಯೊಡೆದು ಸಸಿಗಳಾದವು. ಆದರೆ ಕೈತೋಟದಲ್ಲಿ ಹೆಚ್ಚಾಗಿ ಕಳೆಗಳೇ ಕಾಣಿಸಿಕೊಂಡವು. ಹತಾಶೆಯಿಂದ ಮುಲ್ಲಾ ಅರಮನೆ ತೋಟಗಾರರೊಂದಿಗೆ ಸಮಾಲೋಚಿಸಲು ಅರಮನೆಗೆ ತೆರಳಿದ. ತೋಟಗಾರಿಕೆಯಲ್ಲಿ ಪರಿಣಿತಿ ಪಡೆದ ತೋಟಗಾರನಿಗೆ ಮುಲ್ಲಾ ಹೇಳಿದ “ನಾನು ಕಳೆಗಳನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ: ಕಳೆಗಳನ್ನು ಕಿತ್ತು ಬಿಸಾಡಿದೆ, ಹೆಚ್ಚು ಹೆಚ್ಚು ಹೂವಿನ ಬೀಜಗಳನ್ನು ನೆಟ್ಟೆ. ಆದರೆ ಕೈತೋಟದಲ್ಲಿ ಕಳೆಗಳು ಮಾತ್ರ ಕಡಿಮೆಯಾಗಲಿಲ್ಲ. ಏನು ಮಾಡೋದು? ಎಲ್ಲಿ ನೋಡಿದರೂ ಕಳೆಗಳೇ ಕಳೆಗಳು! ಅರಮನೆಯ ತೋಟಗಾರ ಸ್ವಲ್ಪ ಸಮಯದವರೆಗೆ ಮುಲ್ಲಾ ಹೇಳಿದನ್ನೆಲ್ಲಾ ಕೇಳಿ, ಒಂದು ಬುದ್ಧಿವಂತ ಸಲಹೆಕೊಟ್ಟ: "ನೀವು ಬಹು ಮುಖ್ಯವಾಗಿ ಮಾಡಬೇಕಿರುವುದು ಏನೆಂದರೆ ನೀವು ಕಳೆಗಳನ್ನು ಪ್ರೀತಿಸಲು ಕಲಿಯಬೇಕು”
**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...