Sunday, 8 November 2020

ಮೌನದ ದನಿ



ಕೋವಿ ಹಿಡಿದು ಹಕ್ಕಿಗೆ ಗುರಿಯಿಡಿಯುತ್ತಿದ್ದ 

ಮನುಷ್ಯನಿಗೆ ಹಕ್ಕಿ ಹೇಳಿದ್ದು:

ನಿನ್ನ ಕೋವಿ ನಿನಗೆ ನನ್ನ ಸತ್ತ ದೇಹವನ್ನು

ಕೊಡಬಹುದಷ್ಟೆ, ನನ್ನನಲ್ಲ

---------------------

ತಿಳಿದುಕೋ

ಈ ಲೋಕವು 

ದಡ ಸೇರಿಸಲು ನೀನು ಎದುರಿಸುವ

ಅಲೆಗಳ ಬಗ್ಗೆ ಕೇಳುವುದಿಲ್ಲ

ಅದು ನಿನ್ನನ್ನು ಕೇಳುವುದಿಷ್ಟೆ;

ಹಡಗನ್ನು ದಡ ಸೇರಿಸಿದ್ಯಾ ? ಎಂದು.

----------------------

ಮನುಷ್ಯನಿಗೆ ಮಂದಿರಬೇಕು

ದೇವರಿಗಲ್ಲ

ದೇವರು ಮಂದಿರದ ಗೋಡೆಗಳನ್ನು

ಮೀರಿದವನು

------------------

ಬದುಕಿನಲ್ಲಿದೆ ಎರಡು ದುರಂತಗಳು;

ಒಂದು 

ಎದೆಯೊಳಗಿನ ನಿನ್ನ ಆಸೆಯನ್ನು ದಕ್ಕಿಸಿಕೊಳ್ಳುವುದು

ಇನ್ನೊಂದು 

ಎದೆಯೊಳಗಿನ ಆಸೆಯು ಸಿಗದಿರುವುದು!

---------------------

ಕಾರ್ಮಿಕ ಹೇಳಿದ ಮಾತಿದ್ದು:

ತೃಪ್ತಿಯಿಲ್ಲ

ನನ್ನ ಕೆಲಸದ ಬಗ್ಗೆ ನನಗೆ 

ಎಷ್ಟೂ ಶ್ರಮವಹಿಸಿದರೂ ನಾನು

ದಿನೇ ದಿನೇ

ಜಗದ ತಳಕ್ಕೆ ನೂಕಲ್ಪಡುತ್ತಿದ್ದೇನೆ!

-----------------

ಮನಸ್ಸಿನ ಕಿಟಕಿಯ ತೆರೆದುಬಿಡು

ಹೊಸಗಾಳಿಯು ಬೀಸಿ

ಬೆಳಕು ಅದಕ್ಕೆ ಸೇರಿ

ಹೊಂಗಿರಣವಾಗಿಸಿ ಬಿಡುವುದು ಬದುಕನ್ನು

ಹೊಸ ಸಾಧ್ಯತೆಯ 

ಕನವರಿಕೆಯಲಿ 

---------------------

ಬದುಕೆಂಬುವುದು:

ಒಂದು ಖಾಲಿ ಕಾಗದ ಹಿಡಿದು

ಏನೆನೋ ಬರೆಯಲು ಕುಳಿತು

ಕೊನೆಗೆ  ಏನೂ ಬರೆಯಲಾಗದೆ

ಮನಸ್ಸಿಗೆ ಬಂದಿದ್ದನ್ನು ಗೀಚಿ ಗೀಚಿ

ಸರಿಕಾಣದೆ ಕಾಗದವನ್ನು ಹಿಂಡಿ

ಕಸದ ಬುಟ್ಟಿಗೆ ಬಿಸಾಡುವುದೇ?

- ಜೀವಸೆಲೆ

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...