Sunday, 8 November 2020

ಗೀತಾಂಜಲಿಯ ತುಣುಕು - ಸಿ ಮರಿ ಜೋಸೆಫ್


ಬೆಳ್ಳಂಬೆಳಗ್ಗೆಯೇ ಪಿಸುದನಿಯೊಂದುಲಿಯಿತು, ನಾನೂ ನೀನೂ ಇಬ್ಬರೇ, ದೋಣಿಯಲ್ಲಿ ಕುಳಿತು ಗೊತ್ತಿಲ್ಲದ ನಾಡಿಗೆ ಕೊನೆಯಿಲ್ಲದ ಯಾತ್ರೆಗೆ ಹೊರಡಬೇಕೆಂದು, ಜಗದ ಯಾವ ಜೀವಿಗೂ ಅದು ಗೊತ್ತಾಗಬಾರದೆಂದು.

ತೀರವಿರದ ಸಾಗರದಲ್ಲಿ, ನಿನ್ನ ಮಂದಹಾಸದ ಕೇಳುವಿಕೆಯಲ್ಲಿ, ನನ್ನ ಗಾನವದು ಇಂಚರದಲ್ಲಿ ಉಬ್ಬುವುದು, ಅಲೆಗಳೋಪಾದಿ ನಿರರ್ಗಳವಾಗಿ.

ಗಳಿಗೆಯಿನ್ನೂ ಬಂದಿಲ್ಲವೇ? ಕೆಲಸವಿನ್ನೂ ಉಳಿದಿದೆಯೇ? ನೋಡಲ್ಲಿ, ದಂಡೆಯಲ್ಲಿ ಸಂಜೆಯದು ಇಳಿದಿಹುದು, ಸಮುದ್ರವಕ್ಕಿಗಳು ಗೂಡರಸಿ ಹಾರುತಿವೆ ಬೈಗಿನಲಿ.

ಯಾರಿಗೆ ಗೊತ್ತು ಸಂಕೋಲೆಗಳು ಬಿರಿಯುವುದು ಯಾವಾಗೆಂದು, ಮತ್ತು ಆ ದೋಣಿ,

ಮುಳುಗು ಸೂರ್ಯನ ಕೊನೆಯ ಪ್ರಭೆಯಂತೆ, ನಿಶೆಯಲಿ ಮರೆಯಾಗುವುದೆಂದು?

ಟ್ಯಾಗೋರರ Early in the day it was whispered.... ಕವಿತೆಯ ಭಾವಾನುವಾದ.

-೦-೦-೦-೦-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...