ಸಮಯವನ್ನು ಹಾಳು ಮಾಡುವುದನ್ನು ಬಿಟ್ಟು, ಹೋಗಿ ಕಲ್ಲುಗಳನ್ನು ಸಂಗ್ರಹಿಸುವುದು ಸೂಕ್ತ
ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ವ್ಯಕ್ತಿ, ಚಂದ್ರನ ಮೇಲಿಂದ ಭೂಮಿಯ ಕಡೆ ಕಣ್ಣು ಹಾಯಿಸಿ ನೋಡಿ ಭಾವಪರವಶನಾಗಿ,
ಅಬ್ಬಾ! ಎಷ್ಟು ಮನೋಹರ! ಎಂದು ಉದ್ಗರಿಸಿದ.
ತಕ್ಷಣ ತನ್ನ ಮನಃಸ್ಥಿತಿಯನ್ನು ಬದಲಾಯಿಸಿಕೊಂಡು ತನ್ನಷ್ಟಕ್ಕೆ ತಾನೇ ಹೇಳಿಕೊಂಡ
ಸಮಯವನ್ನು ಹಾಳು ಮಾಡುವುದನ್ನು ಬಿಟ್ಟು, ಹೋಗಿ ಕಲ್ಲುಗಳನ್ನು ಸಂಗ್ರಹಿಸುವುದು ಸೂಕ್ತ ಎಂದು.
=============
ವೈದ್ಯನಿಗೆ ಮೂರು, ವಕೀಲನಿಗೆ ಐದು
ನಿಮ್ಮ ಮಕ್ಕಳು ಹೇಗಿದ್ದಾರೆ? ವ್ಯಕ್ತಿ ಮಹಿಳೆಯನ್ನು ಕೇಳಿದ
ಚೆನ್ನಾಗಿದ್ದಾರೆ ಧನ್ಯವಾದಗಳು ಎಂದು ಉತ್ತರಿಸಿದಳು ಮಹಿಳೆ.
ಮತ್ತೊಮ್ಮೆ ಅವರಿಗೆ ಎಷ್ಟು ವಯಸ್ಸು? ಎಂದು ಕೇಳಿದ ವ್ಯಕ್ತಿಗೆ
ಮಹಿಳೆ ಹೇಳುತ್ತಾಳೆ ; ವೈದ್ಯನಿಗೆ ಮೂರು, ವಕೀಲನಿಗೆ ಐದು ಎಂದು
====================
ಬೇರೆಯವರು ನಿನಗೇನು ಮಾಡಬಾರದೆಂದು ಬಯಸುತ್ತೀಯೋ ಅದನ್ನು ಪರರಿಗೆ ನೀನು ಮಾಡಬೇಡ
ಶಿಷ್ಯನೋರ್ವ ಬಂದು, ಹೆಲ್ಲೆಲ್ ಎಂಬ ಯೆಹೂದ್ಯ ಗುರುವಿನ ಬಳಿ ಹೋಗಿ, ಒಂದೇ ಮಾತಿನಲ್ಲಿ ವೇದಶಾಸ್ತ್ರದ ಸಾರ ಸಮಸ್ತವನ್ನು ಹೇಳ ಬಲ್ಲಿಯಾ? ಎಂದು ಕೇಳಿದಾಗ, ಬೇರೆಯವರು ನಿನಗೇನು ಮಾಡಬಾರದೆಂದು ಬಯಸುತ್ತೀಯೋ ಅದನ್ನು ಪರರಿಗೆ ನೀನು ಮಾಡಬೇಡ, ಇದುವೇ ವೇದಶಾಸ್ತ್ರದ ಸಾರಾಂಶ. ಉಳಿದೆಲ್ಲವೂ ವಿವರಣೆ ಎಂದು ನುಡಿದರು.
=========================
ಗುಲಾಬಿ ಬಣ್ಣದ ಕನ್ನಡಕವನ್ನು ಹಾಕಿಕೊಳ್ಳುವುದರಿಂದ ಮನೆಯ ಬಣ್ಣ ಗುಲಾಬಿ ಬಣ್ಣವಾಗುವುದಿಲ್ಲ.
ತೆನಾಲಿರಾಮ ಮತ್ತು ಅವನ ಪತ್ನಿ ಅವರ ಮನೆಗೆ ಯಾವ ಬಣ್ಣ ಬಳಿಸುವುದು ಎಂದು ಚರ್ಚಿಸುತ್ತಿದ್ದರು.
ಪತ್ನಿ : ನನಗೆ ಗುಲಾಬಿ ಬಣ್ಣವೇ ಬೇಕು
ತೆನಾಲಿ : ಸರಿಯಾಗಿ ವಿಚಾರ ಮಾಡಿ ಹೇಳುತ್ತಿರುವೆಯಾ? ನಾವು ಪ್ರಕಾಶಮಾನವಾಗಿ ಕಾಣುವ ಬಿಳಿಯ ಬಣ್ಣ ಹಾಕಿದರೆ ಒಳ್ಳೆಯದು.
ಪತ್ನಿ : ನಾನು, ನನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ - ಗುಲಾಬಿ ಬಣ್ಣವಿದ್ದರೆ ಮಾತ್ರ ನಾನು ಸಂತೋಷಪಡುತ್ತೇನೆ.
ತೆನಾಲಿ (ಅವಳಿಗೆ ಗುಲಾಬಿ ಬಣ್ಣದ ಕನ್ನಡಕವನ್ನು ಕೊಡುತ್ತಾ) : ಒಳ್ಳೆಯದು, ನಿನ್ನಿಷ್ಟದಂತೆಯೇ ಆಗಲಿ. ಈ ಕನ್ನಡಕವನ್ನು ಹಾಕಿಕೋ. ಬರೀ ಗೋಡೆ ಅಷ್ಟೇ ಅಲ್ಲ, ನಾನೂ ಕೂಡಾ ಗುಲಾಬಿ ಬಣ್ಣವಾಗಿಯೇ ಕಾಣ್ತೀನಿ !
ತೆನಾಲಿ ರಾಮ ಏನು ಆಲೋಚನೆ ಮಾಡುತ್ತಿದ್ದ - ಗುಲಾಬಿ ಬಣ್ಣದ ಕನ್ನಡಕವನ್ನು ಹಾಕಿಕೊಳ್ಳುವುದರಿಂದ ಮನೆಯ ಬಣ್ಣ ಗುಲಾಬಿ ಬಣ್ಣವಾಗುವುದಿಲ್ಲ.
ಸಂಗ್ರಹ -ಇನ್ನಾ
**********
No comments:
Post a Comment