Monday, 9 November 2020

ಗೀತಾಂಜಲಿ

ಬಿಟ್ಟುಬಿಡು,ಹಾಡುಪಾಡು 

ಭಜನೆಯನುಮಣಮಣಮಣಮಂತ್ರವನು!

ಬಾಗಿಲುಬಡಿದಡಿಯತ್ತಲ

ಮೊಡಕಿನಲಿಳಿತು ನೀ ಪೂಜಿಸುವೆ ಯಾರನ್ನು?

ಕಣ್ದೆರೆದುನೋಡುನಿನ್ನೆದುರುವರಿಲ್ಲ.

ಅವನಿದ್ದಾನೆ ಗಟ್ಟಿನೆಲವ ಬಗೆವನ ಬಳಿ, 

ರಸ್ತೆ ಮಾಡಲು ಬಂಡೆಯೊಡೆಯುವನ ಬಳಿ.

ಬಿಸಿಲಲ್ಲಿ ಮಳೆಯಲ್ಲಿ ವಸನವದು ಮಣ್ಣಾಗಿ ದೇವನಿಹನು ಅವರ ಬಳಿ.

ಬಿಸುಟು ನಿನ್ನ ಪವಿತ್ರ ಮೇಲ್ವಸ್ತ್ರವ ಈಗಿಂದೀಗ ಕೆಳಗಿಳಿದು ಬಾರಾ ಮಣ್ಣಿಗೆ.

ಧ್ಯಾನವನ್ನು ಬಿಟ್ಟು ಬಾ,ಹೂವು ಗಂಧ ತೊರೆದು ಬಾ!

ಬಟ್ಟೆ ಹರಿದುಹೋದರೇನು,ಳೆಯು ಮೆತ್ತಿಕೊಂಡರೇನು?

ಭೆಟ್ಟಿಯಾಗು ಅವನನುಸರೀಕನಾಗು ದುಡಿತದಿ,ಹಣೆಯು ಬೆವರ ಸುರಿಯಲಿ.


(ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯಿಂದ Leave this chanting and singing and telling of beads’ ಪದ್ಯದ ಭಾವಾನುವಾದ.ಸಿ ಮರಿಜೋಸೆಫ್ ನವರಿಂದ)


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...