Sunday, 8 November 2020

ಕಥಾದನಿ

ಆದ್ವೈತದ ಆನೆ
ಆದ್ವೈತಿಯೊಬ್ಬ ಪ್ರವಚನ ಮಾಡಿ ಜಗತ್ತೆಲ್ಲ ಮಿಥ್ಯೆ, ಮಾಯೆ, ಬ್ರಹ್ಮವೊಂದೇ ಸತ್ಯ ಎಂದೆಲ್ಲ ದೀರ್ಘವಾಗಿ ವಿವರಿಸಿ. ಪ್ರವಚನ ಮುಗಿಸಿ ಬೀದಿಯಲ್ಲಿ ಬರುತ್ತಿದ್ದಂತೆ ದೇವಸ್ಥಾನದ ಆನೆ ಆತನನ್ನು ಓಡಿಸಿಕೊಂಡು ಬಂತು. ಆತನು ಓಡಲು ತೊಡಗಿದ. ಪ್ರವಚನ ಕೇಳಿದವನೊಬ್ಬ ಪ್ರಶ್ನೆ ಮಾಡಿದ, ಏನಯ್ಯಾ ಜಗತ್ತು ಸುಳ್ಳು ಮಾಯೆ ಅನ್ನುತ್ತಿ. ಬ್ರಹ್ಮವೆನ್ನುತ್ತೀ. ಆನೆ ಬಂದರೆ ಓಡುತ್ತೀ. ಅದೂ ದೇವರ ಆನೆ ಅದು. ಬ್ರಹ್ಮಕ್ಕೆ ಬ್ರಹ್ಮದ ಭಯವೆ? `ಅಯ್ಯಾ ನಿನಗೆ ನನ್ನ ಪ್ರವಚನ ಅರ್ಥವಾಗಲಿಲ್ಲ. ಅಜ್ಞಾನ ಹೋಗಲಿಲ್ಲ. ಜಗತ್ತೆ ಸುಳ್ಳು. ಆ ಆನೆ ಸುಳ್ಳು, ನಾನು ಓಡಿದ್ದು, ಈಗ ನಾನು ಉತ್ತರ ಕೊಟ್ಟಿದ್ದು, ನೀನು ಹೇಳಿದ್ದು ಎಲ್ಲವೂ ಸುಳ್ಳು, ಮಾಯೆ, ಗಜೋಷ ಮಿಥ್ಯಾ, ಪಲಾಯನೋಪಿ ಮಿಥ್ಯಾ ಎಂದು ಗುರು ಉತ್ತರಿಸಿದ

--------------------------
ಉಳಿಸಿಕೋ. ಮುಂದೆ ನಿನ್ನ ಮಕ್ಕಳಿಗೆ ಉಪಯೋಗಕ್ಕೆ ಬಂದೀತು
ವಯಸ್ಸಾದ ತನ್ನ ತಂದೆ, ತನಗೂ ಕುಟುಂಬಕ್ಕೂ ಹೊರೆ ಎಂಬ ತಿಳಿದ ಒಬ್ಬನು. ಅವನನ್ನು ಪೆಟ್ಟಿಗೆಯೊಳಗಿಟ್ಟು ಪರ್ವತದ ತುದಿ ಗೊಯ್ದು ಪಟ್ಟಿಗೆಯನ್ನು ಉರುಳಿಸಿ ಬಿಡಬೇಕೆಂದಿದ್ದ. ಅಷ್ಟರಲ್ಲಿ ಒಳಗಿಂದ ಒಂದು ಬೆಳಕು ಮತ್ತು ಮಾತುಗಳು ಬಂದವು.
ಅಯ್ಯಾ ಮಗನೆ, ನೀನು ನನ್ನನ್ನು ಪೆಟ್ಟಿಗೆಯಿಂದ ತೆಗೆದು ಪರ್ವತಾಗ್ರದಿಂದ ಕೆಳಗೆಸೆದು ಬಿಡು. ಒಳ್ಳೆಯದೇ-ಆದರೆ ಪೆಟ್ಟಿಗೆಯನ್ನು ಉಳಿಸಿಕೋ. ಮುಂದೆ ನಿನ್ನ ಮಕ್ಕಳಿಗೆ ಉಪಯೋಗಕ್ಕೆ ಬಂದೀತು.

--------------------
ಅಯ್ಯಾ, ನೀನು ಆಚೆ ದಡದಲ್ಲೇ ಇದ್ದೀ
ನದಿಯ ತೀರದಲ್ಲಿ ಕುಳಿತು ಬಹಳ ಹೊತ್ತು ಆಲೋಚಿಸಿ ತಲೆ ಕೆರೆದು ಕೊಳ್ಳುತ್ತಿದ್ದ ಒಬ್ಬನ ಬಳಿ ಬುದ್ದನು ಬಂದು ಕೇಳಿದ.
ಏನಯ್ಯ, ಇಲ್ಲಿ ಒಬ್ಬನೇ ಕುಳಿತು ಯೋಚಿಸುತ್ತಿ, ನದಿಯನ್ನೇ ನೋಡುತ್ತಿದ್ದಿ?
ವಿಸ್ತಾರವಾದ ಈ ನದಿಯ ಆಚೆ ದಾಟಿ ಹೋಗುವುದು ಹೇಗೆಂದು ಯೋಚನೆ
ಅಯ್ಯಾ, ನೀನು ಆಚೆ ದಡದಲ್ಲೇ ಇದ್ದೀ, ನಿನಗದು ಗೊತ್ತಿಲ್ಲ ಅಷ್ಟೇ!!!
ಶಿಷ್ಯ ಆಕಾಶ ನೋಡಿದ.

ಸಂಗ್ರಹ - ಇನ್ನಾ

**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...