ಕನ್ನಡದಿ ಪರಿಚಯಿಸಿ ಆದರುತ್ತಮನುವಾದಕ;
ಸನ್ನಡತೆ, ಶುಭನುಡಿಯ ಬೈಬಲ್ ಶ್ರೀಗ್ರಂಥವನು
ಕನ್ನಡದಿ ಪರಿಚಯಿಸಿ ಆದರುತ್ತಮನುವಾದಕ;
ಹಿನ್ನಡೆಯಾದರೂ ಕಂಗೆಡದೆ ಸಾಧಿಸಿ ಗುರಿಯನು
ಚೆನ್ನುಡಿಯಲಿ ಪ್ರಕಟಿಸಿ ಗೈದರು ಬದುಕು ಸಾರ್ಥಕ.
ಕರುನಾಡ ಮಣ್ಣಲಿಹ ಕ್ರೈಸ್ತ ಹೆಜ್ಜೆ ಗುರುತುಗಳ
ಪರಿಪರಿಯಿಂ ಶೋಧಿಸಿ, ದಾಖಲಿಸಿದರಿತಿಹಾಸ;
ಹಿರಿದಾದ ಶ್ರಧ್ಧೆಯಿಂ ಲೆಕ್ಕಿಸದನೇಕ ವಿಘ್ನಗಳ
ಗುರುತರದಿಗೈದ ಸಾಧನೆ ಹಿರಿದೊಂದು ಸಾಹಸ.
ಬೆಂಗಳೂರಲಿ ಕನ್ನಡ ಹಿನ್ನಡೆದಿರೆ ಧಾರ್ಮಿಕ ರಂಗದೊಳು
ಭಂಗವುಂಟಾದರೂ ಅವಿರತದಿಂ ನಡೆಸಿ ಹೋರಾಟ;
ವ್ಯಂಗ್ಯ ನುಡಿ, ಅವಮಾನವೆಲ್ಲವ ಸಹಿಸಿ ಮನದೊಳು
ತ್ತುಂಗ ಸ್ಥಾನವದಕೆ ಗಳಿಸಿಕೊಟ್ಟ ಗುರುಸಾಮ್ರಾಟ.
ನೇಮ, ನಿಷ್ಥೆ ಮೇಣ್ ಶಿಸ್ತು, ಶ್ರಮ, ಶ್ರಧ್ಧೆಗಳ ಓಜ
ಸ್ವಾಮಿ ಅಂತಪ್ಪ, ಕನ್ನಡ ಕ್ರೈಸ್ತರ ನಾಡೋಜ.
--------------
ಶ್ರೀಸ್ವಾಮಿ,
ಸಾಹಿತಿ, ಬೆಂಗಳೂರು
--------------
No comments:
Post a Comment