Tuesday, 10 November 2020

ದ್ವಿಪದಿಗಳು - ಬಸೂ

ರಸ್ತೆಯಲ್ಲಿ ತಗ್ಗಿತೋ ನಾನೇ ಬಿದ್ದೆನೋ ಯಾರು ನೂಕಿದರೋ ಗೊತ್ತಿಲ್ಲ

ಯಾರ ವಿಚಾರಿಸಲಿ ಎಲ್ಲ ನನ್ನಂಥವರೇ ನಿನಗೊಂದು ನೆಪಬೇಕಿತ್ತು ಹೊರೆ ಹೊರಿಸಲು

--------------

ಆ ಕ್ಷಣ ನನ್ನೊಳಗೂ ಲೋಕ ಬದಲಿಸುವ ಓಟ ಆರಂಭಿಸಬೇಕೆನಿಸಿತು

ಹಿಂದಿನಿಂದ ಬಂದವ ನನ್ನ ಬದಲಿಸುವ ರಿಲೇ ಕೋಲು ಕೈಗಿತ್ತು ಓಡು ಎಂದನು

---------

ಬೆಳಕಿದ್ದಾಗ ಈ ಲೋಕ ನನ್ನನಷ್ಟೇ ಅಲ್ಲ, ನನ್ನ ನೆರೆಳನೂ ಗುರಿತಿಸಿತು

ಕತ್ತಲಾಯ್ತು ನೋಡಿ, ನನ್ನ ನೆರಳನ್ನಲ್ಲ ನನ್ನನ್ನೂ ಗುರುತಿಸದೆ ನಡೆದುಹೋಂಯಿತ್ತು

----------

ಗೆಳೆಯಾ ಹಣತೆ ಹಚ್ಚಿಡು

ಕತ್ತಲಾಗಿದೆಯೆಂದು ಗೊತ್ತಾಗಲಿ

-----------

ಮಳೆ ರಭಸಕ್ಕೆ ಭೂಮಿ ಬೆದರಲಿಲ್ಲ

ಬೆರಗು ತೋರಿತು

-----------------

- ಬಸೂ

ಚಿಂತಕರು, ಕವಿ,

ಲಡಾಯಿ  ಪ್ರಕಾಶನ ಮುಖ್ಯಸ್ಥರು 


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...