ರಸ್ತೆಯಲ್ಲಿ ತಗ್ಗಿತೋ ನಾನೇ ಬಿದ್ದೆನೋ ಯಾರು ನೂಕಿದರೋ ಗೊತ್ತಿಲ್ಲ
ಯಾರ ವಿಚಾರಿಸಲಿ ಎಲ್ಲ ನನ್ನಂಥವರೇ ನಿನಗೊಂದು ನೆಪಬೇಕಿತ್ತು ಹೊರೆ ಹೊರಿಸಲು
--------------
ಆ ಕ್ಷಣ ನನ್ನೊಳಗೂ ಲೋಕ ಬದಲಿಸುವ ಓಟ ಆರಂಭಿಸಬೇಕೆನಿಸಿತು
ಹಿಂದಿನಿಂದ ಬಂದವ ನನ್ನ ಬದಲಿಸುವ ರಿಲೇ ಕೋಲು ಕೈಗಿತ್ತು ಓಡು ಎಂದನು
---------
ಬೆಳಕಿದ್ದಾಗ ಈ ಲೋಕ ನನ್ನನಷ್ಟೇ ಅಲ್ಲ, ನನ್ನ ನೆರೆಳನೂ ಗುರಿತಿಸಿತು
ಕತ್ತಲಾಯ್ತು ನೋಡಿ, ನನ್ನ ನೆರಳನ್ನಲ್ಲ ನನ್ನನ್ನೂ ಗುರುತಿಸದೆ ನಡೆದುಹೋಂಯಿತ್ತು
----------
ಗೆಳೆಯಾ ಹಣತೆ ಹಚ್ಚಿಡು
ಕತ್ತಲಾಗಿದೆಯೆಂದು ಗೊತ್ತಾಗಲಿ
-----------
ಮಳೆ ರಭಸಕ್ಕೆ ಭೂಮಿ ಬೆದರಲಿಲ್ಲ
ಬೆರಗು ತೋರಿತು
-----------------
- ಬಸೂ
ಚಿಂತಕರು, ಕವಿ,
ಲಡಾಯಿ ಪ್ರಕಾಶನ ಮುಖ್ಯಸ್ಥರು
No comments:
Post a Comment